ದುಬೈ: 2021ರ ಐಪಿಎಲ್ ಪಂದ್ಯಾವಳಿ ಹೈದರಾಬಾದ್ ತಂಡದ ಮಾಜಿ ನಾಯಕ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ಗೆ ಉತ್ತಮ ನೆನಪುಗಳನ್ನೇನೂ ಉಳಿಸಿಲ್ಲವೆಂದೇ ಹೇಳಬೇಕು. ಸತತ ಬ್ಯಾಟಿಂಗ್ ವೈಫಲ್ಯಗಳು ಹಾಗೂ ಅಲ್ಪ ಮೊತ್ತಗಳ ಸಾಧನೆಯಿಂದಾಗಿ ಅವರನ್ನು ಪಂದ್ಯಾವಳಿಗಳ ನಡುವೆಯೇ ನಾಯಕತ್ವದಿಂದ ಕೆಳಸಗಿಳಿಸಿ ಅವರ ಸ್ಥಾನಕ್ಕೆ ನ್ಯೂಜಿಲೆಂಡ್ನ ಕೇನ್ ವಿಲಿಯಂಸನ್ರನ್ನು ತರಲಾಗಿತ್ತು. ಇಡೀ ಪಂದ್ಯಾವಳಿಯಲ್ಲಿ ಕೇವಲ 2 ಪಂದ್ಯಗಳಲ್ಲಿ ಆಡಿದ ನಂತರ ಉಳಿದ ಪಂದ್ಯಗಳಿಗೂ ಅವರನ್ನು ಕೈಬಿಡಲಾಗಿತ್ತು. ಡೇವಿಡ್ ವಾರ್ನರ್ ನಾಯಕತ್ವದಲ್ಲಿ ತಂಡ 2016ರಲ್ಲಿ ಪ್ರಶಸ್ತಿ ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇತ್ತೀಚೆಗೆ ವಾರ್ನರ್ ಸಾಮಾಜಿಕ ಜಾಲತಾಣಗಳ ಮೂಲಕ ಹೈದರಾಬಾದ ತಂಡದ ಅಭಿಮಾನಿಗಳಿಗೆ ವಿದಾಯ ಹೇಳಿದ್ದು ತಂಡವನ್ನು ಬಿಡುವ ಮುನ್ಸೂಚನೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ, ಇತ್ತೀಚಿನ ತಮ್ಮ ನಿರಾಶಾದಾಯಕ ಪ್ರದರ್ಶನಗಳ ಬಗ್ಗೆ ಕೇಳಿದಾಗ ಅವರು “ನನ್ನನ್ನು ನಾಯಕತ್ವದಿಂದ ಕೈಬಿಡುತ್ತಿರುವುದಕ್ಕೆ ತಂಡದ ಆಡಳಿತವು ಯಾವುದೇ ವಿವರಣೆಯನ್ನು ನೀಡಿಲ್ಲ” ಎಂದರು. ಆದರೂ, ಇದೊಂದು ಸರ್ವಾನುಮತದ ನಿರ್ಣಯವೇ ಆಗಿರಬಹುದು, ಯಾರು ನನ್ನ ಬೆಂಬಲಕ್ಕಿದ್ದರೋ ಅಥವಾ ಯಾರು ನನ್ನ ವಿರುದ್ಧವಿದ್ದರೋ ಹೇಳಲಾಗದು ಎಂದರು. ಯಾವುದೇ ಕಾರಣ ನೀಡದೆ ನನ್ನನ್ನು ತಂಡದ ನಾಯಕತ್ವದಿಂದ ಕೆಳಗಿಳಿಸಿದ್ದು ನನಗೆ ನಿರಾಶೆ ತಂದಿದ್ದು, ನನ್ನ ಹಿಂದಿನ ಸಾಧನೆಗಳು ನನ್ನ ಬೆಂಬಲಕ್ಕೆ ನಿಲ್ಲಬಹುದೆಂದು ನಾನು ಭಾವಿಸಿದ್ದೆ ಎಂದರು.
“ತಂಡಕ್ಕಾಗಿ 100ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ ನಾನು, ಚೆನ್ನೈನಲ್ಲಿ ನಡೆದ ಮೊದಲ 5 ಪಂದ್ಯಗಳ ಪೈಕಿ ನಾಲ್ಕರಲ್ಲಿ ವಿಫಲನಾಗಿದ್ದುದೇ ಇದಕ್ಕೆ ಕಾರಣವಾಗಿರಬಹುದೇನೋ, ಉತ್ತರಿಸವುದು ಕಷ್ಟ, ಅರಗಿಸಿಕೊಳ್ಳುವುದೂ ಕಷ್ಟ ಎಂದರು. ನನ್ನಲ್ಲಿ ಕೆಲವು ಪ್ರಶ್ನೆಗಳಿದ್ದು ಬಹುಶ: ಅವುಗಳಿಗೆ ಉತ್ತರ ಸಿಗಲಾರದು, ಅದರೂ ಎಲ್ಲವನ್ನೂ ಮರೆತು ಮುನ್ನಡೆಯಬೇಕಾಗಿದೆ ಎಂದರು.” ತಂಡದ ಪರವಾಗಿ ಆಡಲು ನಾನು ಬಯಸುವುದಾದರೂ ತಂಡದ ಆಡಳಿತವು ನಿರ್ಧಾರ ಕೈಗೊಳ್ಳಬೇಕಿದೆ ಎಂದು ಡೇವಿಡ್ ವಾರ್ನರ್ ತಿಳಿಸಿದರು. ಆಸ್ಟ್ರೇಲಿಯಾದ ಈ ಆಕರ್ಷಕ, ಬಿರುಸಿನ ಹೊಡೆತಗಳ ಆರಂಭಿಕನ ಹೈದರಾಬಾದ್ ತಂಡದ ಜೊತೆಗಿನ ಐಪಿಲ್ ಭವಿಷ್ಯ ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ.
David Warner dropped from captaincy of SRH
ಇದನ್ನೂ ಓದಿ: IPL 2021 | ಪ್ಲೇ ಆಫ್ಗೂ ಮುನ್ನ ಆರ್ಸಿಬಿ ಬಯೋಬಬಲ್ ತೊರೆದ ಇಬ್ಬರು ಆಟಗಾರರು: ಕಾರಣವೇನು?
ಇದನ್ನೂ ಓದಿ: IPL: ಆರ್ ಸಿ ಬಿ ವಿರುದ್ಧ ಭಾರಿ ಅಂತರದ ಗೆಲುವು ಸಾಧಿಸಿದ ಕೆಕೆಆರ್
Discussion about this post