ದುಬೈ: ಇಂಗ್ಲೆಂಡ್ ವಿರುದ್ಧದ ಪ್ರಥಮ ಅಭ್ಯಾಸ ಪಂದ್ಯದ ಟಾಸ್ ಸಮಯದಲ್ಲಿ ಮಾತನಾಡಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಮುಗಿದ ಐಪಿಲ್ ಪಂದ್ಯಾವಳಿಯ ನಂತರದ ಬದಲಾದ ಪರಿಸ್ಥಿತಿಯಲ್ಲಿ ತಂಡದ ಯೋಜನೆಗಳನ್ನು ಬದಲಾಯಿಸಿಕೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸಿದೆಯೆಂದು ತಿಳಿಸಿದರು.
ಮುಖ್ಯವಾಗಿ ತಂಡದ ಆರಂಭಿಕ ಜೋಡಿಯ ಆಯ್ಕೆಯ ಬಗ್ಗೆ ಹೇಳುತ್ತಾ ಶಿಖರ್ ಧವನ್ರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮ ಆರಂಭಿಕರಾಗುವುದು ನಿಶ್ಚಿತವಾಗಿದ್ದು ಅವರ ಜೊತೆ ಆಟ ಆರಂಬಿಸುವ ಇನ್ನೊಬ್ಬ ಆಟಗಾರ ಯಾರಾಗಬೇಕೆನ್ನುವ ವಿಷಯದಲ್ಲಿ ಗೊಂದಲವಿತ್ತು. ರೋಹಿತ್ರ ಜೊತೆ ನಾನೇ ಇನ್ನಿಂಗ್ಸ್ ಆರಂಭಿಸಬೇಕೇ ಅಥವಾ ಕೆ.ಎಲ್. ರಾಹುಲ್ರನ್ನು ಇನ್ನೊಬ್ಬ ಆರಂಭಿಕರನ್ನಾಗಿಸಬೇಕೇ ಎಂಬ ಬಗ್ಗೆ ಚರ್ಚೆ ನಡೆದು ನಾನೇ ಇನ್ನೊಬ್ಬ ಆರಂಭಿಕನಾಗಿ ರಾಹುಲ್ರನ್ನು 3ನೇ ಕ್ರಮಾಂಕದಲ್ಲಿ ಆಡಿಸಬೇಕೆನ್ನುವುದು ಸರ್ವಾನುಮತದ ಅಭಿಪ್ರಾಯವಾಗಿತ್ತು ಎಂದು ಕೊಹ್ಲಿ ತಿಳಿಸಿದರು.
ಯಾರು ಯಾವ ಸ್ಥಾನದಲ್ಲಿ ಆಡುತ್ತಾರೆ ಹಾಗೂ ತಂಡಕ್ಕೆ ನಾವು ಎಷ್ಟು ಬೇಗ ಹೊಂದಿಕೊಳ್ಳುತ್ತೇವೆ ಎನ್ನುದು ಬಹಳ ಪ್ರಾಮುಖ್ಯತೆಯ ವಿಚಾರವೆಂದ ಕೊಹ್ಲಿ, ಪ್ರಥಮ ಪಂದ್ಯದಲ್ಲಿ ಹೇಗೆ ಆಡುತ್ತೇವೆನ್ನುವುದು ಬಹಳ ಮುಖ್ಯವಾಗಿದ್ದು ನಮ್ಮ ಯೋಜನೆಗಳು ಈಗಾಗಲೇ ಸಿದ್ಧವಾಗಿವೆಯೆಂದರು. ತಂಡದ ಸದಸ್ಯರಿಗೆ ಸಾಧ್ಯವಾದಷ್ಟು ಹೆಚ್ಚು-ಹೆಚ್ಚು ಅವಕಾಶಗಳನ್ನು ನೀಡಬೇಕೆಂದು ನಿರ್ಧರಿಸಿರುವುದಲ್ಲದೇ ಅವರಿಗೆ ಸೂಕ್ತ ಸಮಯವನ್ನೂ ನೀಡಲು ಬಯಸಿದ್ದೇವೆಂದರು.
ಇಂಗ್ಲೆಂಡ್ ವಿರುದ್ಧದ ಪ್ರಥಮ ಅಭ್ಯಾಸದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಇಂಗ್ಲೆಂಡ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಇಂಗ್ಲೆಂಡ್ ತಂಡಕ ನಾಯಕ ಅಯಾನ್ ಮಾರ್ಗನ್ರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದ್ದು ಅವರ ಅನುಪಸ್ಥಿತಿಯಲ್ಲಿ ಜೋಸ್ ಬಟ್ಲರ್ ತಂಡವನ್ನು ಮುನ್ನಡೆಸಲಿದ್ದಾರೆ.
Cricket News Captain Virat Kohli reveals team plans for the upcoming T20 world cup
ಇದನ್ನೂ ಓದಿ: T-20 World Cup: ಅಶ್ವಿನ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಿದ್ದಕ್ಕೆ ಏನಂದರು ಕ್ಯಾಪ್ಟನ್ ಕೊಹ್ಲಿ?
ಇದನ್ನೂ ಓದಿ: ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ಅಂತ್ಯ: ಏನಂದರು ಕಿಚ್ಚ ಸುದೀಪ್?
Discussion about this post