ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಕ್ರಿಕೆಟ್ನ 2022ರ ಟೂರ್ನಿಗೆ ಪಂಜಾಬ್ ಕಿಂಗ್ಸ್ ತಂಡವು ನಾಯಕ ಕೆ.ಎಲ್.ರಾಹುಲ್ ಅವರನ್ನು ಕೈಬಿಟ್ಟಿರುವ ವಿಚಾರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಆ ಕುರಿತು ಸ್ಪಷ್ಟನೆ ನೀಡಿದ್ದಾರೆ.
ರಾಹುಲ್ ಕೈಬಿಡಲು ಕಾರಣವೇನು ಎಂಬುದನ್ನು ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರೂ ಆಗಿರುವ ಕುಂಬ್ಳೆ ಬಹಿರಂಗಪಡಿಸಿದ್ದಾರೆ.
ಕುಂಬ್ಳೆ ಹೇಳಿದ್ದೇನು?
ಕೆ.ಎಲ್.ರಾಹುಲ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಬೇಕು ಎಂಬ ಇಚ್ಛೆ ಹೊಂದಿದ್ದೆವು. ಆದರೆ, ಅವರೇ ಹರಾಜು ಪ್ರಕ್ರಿಯೆಯ ಭಾಗವಾಗುವುದಾಗಿ ಮನವಿ ಮಾಡಿದರು ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ಇದನ್ನೂ ಓದಿ: IPL 2022: ಕನ್ನಡಿಗ ರಾಹುಲ್ ಕೈಬಿಟ್ಟ ಪಂಜಾಬ್, ಪಾಂಡ್ಯಗಿಲ್ಲ ಮುಂಬೈ ಪರ ಆಡುವ ಅವಕಾಶ
‘ಸ್ಟಾರ್ ಸ್ಪೋರ್ಟ್ಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅನಿಲ್ ಕುಂಬ್ಳೆ, ‘ನಿಜಕ್ಕೂ ನಾವು ರಾಹುಲ್ ಅವರನ್ನು ಉಳಿಸಿಕೊಳ್ಳಲು ಬಯಸಿದ್ದೆವು. ಅದಕ್ಕಾಗಿಯೇ ಅವರನ್ನು ಎರಡು ವರ್ಷಗಳ ಹಿಂದೆ ನಾಯಕನನ್ನಾಗಿ ಮಾಡಿದ್ದೆವು. ಆದರೆ, ಅವರು ಹರಾಜಿನ ಭಾಗವಾಗಲು ನಿರ್ಧರಿಸಿದರು. ನಾವದನ್ನು ಗೌರವಿಸುತ್ತೇವೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಆಯ್ಕೆಯು ಆಟಗಾರನ ಹಕ್ಕೂ ಹೌದು’ ಎಂದು ಹೇಳಿದ್ದಾರೆ.
Thoughts from the Head of the Head Coach! 😎
Listen in to @anilkumble1074 🗣#SaddaPunjab #PunjabKings #IPL2022Retention #IPLRetention pic.twitter.com/kO3EX1scg2
— Punjab Kings (@PunjabKingsIPL) November 30, 2021
ಇದರೊಂದಿಗೆ, ರಾಹುಲ್ ಅವರನ್ನು ಪಂಜಾಬ್ ಕೈಬಿಟ್ಟಿದ್ದೇಕೆ ಎಂಬ ಪ್ರಶ್ನೆಗೆ ತೆರೆಬಿದ್ದಿದೆ. ಗರಿಷ್ಠ ನಾಲ್ವರನ್ನು ಉಳಿಸಿಕೊಳ್ಳುವ ಅವಕಾಶ ಇದ್ದರೂ ಮಯಂಕ್ ಅಗರ್ವಾಲ್ ಮತ್ತು ಆರ್ಶದೀಪ್ ಸಿಂಗ್ ಅವರನ್ನು ಮಾತ್ರವೇ ಪಂಜಾಬ್ ಕಿಂಗ್ಸ್ ಉಳಿಸಿಕೊಂಡಿದೆ.
ಇನ್ನಷ್ಟು ಸುದ್ದಿಗಳು…
IPL 2022: ತಂಡಗಳು ಉಳಿಸಿಕೊಂಡ ಆಟಗಾರರು ಯಾರೆಲ್ಲ? ಇಲ್ಲಿದೆ ನೋಡಿ
ಅಕ್ಷರ್ ಪಟೇಲ್ ಮಾಂತ್ರಿಕ ಬೌಲಿಂಗ್ ದಾಳಿಗೆ ಮಂಕಾದ ನ್ಯೂಜಿಲ್ಯಾಂಡ್
ವಿರಾಮದ ವೇಳೆ ವಿರಾಟ್ ಸೆಲ್ಫೀ: ಅನುಷ್ಕಾರನ್ನು ‘ಮೈ ರಾಕ್’ ಎಂದ ಕಿಂಗ್ ಕೊಹ್ಲಿ
ಟ್ವೆಂಟಿ-20 ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್: ವಿರಾಟ್ ಕೊಹ್ಲಿಯ ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್
ನಾಯಕ ರೋಹಿತ್, ರಾಹುಲ್ ಅಬ್ಬರದ ಬ್ಯಾಟಿಂಗ್: ನ್ಯೂಜಿಲೆಂಡ್ ವಿರುದ್ಧ ಟ್ವೆಂಟಿ-20 ಸರಣಿ ಗೆದ್ದ ಭಾರತ
Discussion about this post