2011ರ ವಿಶ್ವಕಪ್ ಹೀರೋ, ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಭಾನುವಾರ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಗೌತಮ್ ಗಂಭಿರ್ ಸೇರಿದಂತೆ ಅನೇಕರು ಅವರಿಗೆ ಶುಭ ಹಾರೈಸಿದ್ದಾರೆ.
‘ಜನ್ಮದಿನದ ಶುಭಾಶಯಗಳು ಯುವಿ! ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ಕೆಲವು ಸ್ಮರಣೀಯ ಕ್ಷಣಗಳನ್ನು ನಿಮ್ಮೊಂದಿಗೆ ಕಳೆದಿದ್ದೇನೆ. ಇಂತಹ ಹಲವು ಕ್ಷಣಗಳನ್ನು ಇನ್ನು ಮುಂದೆಯೂ ನಿರೀಕ್ಷಿಸಬಹುದು… ನಿಮ್ಮ ಈ ದಿನ ಮತ್ತು ವರ್ಷ ಚೆನ್ನಾಗಿರಲೆಂದು ಹಾರೈಸುತ್ತೇನೆ ಸೂಪರ್ಸ್ಟಾರ್!’ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
Happy birthday Yuvi! Have spent some of my most memorable moments with you on and off the field. Look forward to many such moments…. Wish you a great day and year ahead soooperstar!! 🌟@YUVSTRONG12 pic.twitter.com/SFMR2vkuBn
— Sachin Tendulkar (@sachin_rt) December 12, 2021
‘ಅದು ಮೈದಾನದಲ್ಲಾಗಿರಲಿ, ಹೊರಗೆಯೇ ಆಗಿರಲಿ, ನೀವು ಎಲ್ಲವನ್ನೂ ಸುಲಭವಾಗಿ ಕಾಣುವಂತೆ ಮಾಡುತ್ತೀರಿ. ದೇವರು ನಿಮಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಆಶೀರ್ವದಿಸಲಿ’ ಎಂದು ದೆಹಲಿ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.
You make everything look easy Prince be it on the field or of it! May god bless u with a long & healthy life @YUVSTRONG12 pic.twitter.com/g7j7RO3Bsu
— Gautam Gambhir (@GautamGambhir) December 12, 2021
‘ಅದ್ಭುತ ಕ್ರಿಕೆಟಿಗ ಮತ್ತು ಅದ್ಭುತ ಮನುಷ್ಯ. ನೀವು ನೀಡಿದ ಮಾರ್ಗದರ್ಶನಕ್ಕಾಗಿ ಧನ್ಯವಾದಗಳು ಯುವಿಪಾಜಿ. ನಾನು ನಿಮಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ’ ಎಂದು ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ ಟ್ವೀಟ್ ಮಾಡಿದ್ದಾರೆ.
A fantastic cricketer and a wonderful human being. Thank you for all your guidance @YUVSTRONG12 paaji and I wish you a very happy birthday 🎂🥳
— Shubman Gill (@ShubmanGill) December 12, 2021
‘ನಿಮಗೆ ಜನ್ಮದಿನದ ಶುಭಾಶಯಗಳು ಯುವಿಪಾ ಜೀ. ದೇವರು ನಿಮಗೆ ಯಶಸ್ಸು, ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ನೀಡಲಿ. ನಿಮ್ಮ ಭೇಟಿ ಎದುರುನೋಡುತ್ತಿದ್ದೇನೆ’ ಎಂದು ಮಾಜಿ ಕ್ರಿಕಟಿಗ ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.
Wish you a very Happy Birthday Yuvi Pa @YUVSTRONG12. May God bless you with loads of success, happiness & good health 🤗. See you soon ❤️ #happybirthdayuvrajsingh pic.twitter.com/Dq1G2yt7d1
— Suresh Raina🇮🇳 (@ImRaina) December 12, 2021
ನೂರಾರು ಕ್ರಿಕೆಟಿಗರು, ಲಕ್ಷಾಂತರ ಅಭಿಮಾನಿಗಳು ಯುವಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
2011ರ ವಿಶ್ವಕಪ್ ಟೂರ್ನಿಯುದ್ದಕ್ಕೂ ಅಮೋಘವಾಗಿ ಆಡಿದ್ದ ಯುವರಾಜ್ ಸಿಂಗ್ ಭಾರತ ಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅನಾರೋಗ್ಯವಿದ್ದಾಗಲೂ ಫೈನಲ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್, ಫೀಲ್ಡಿಂಗ್, ಬ್ಯಾಟಿಂಗ್ ಪ್ರದರ್ಶಿಸಿ ಗೆಲುವು ತಂದುಕೊಟ್ಟಿದ್ದರು. ಆ ಸಂದರ್ಭದಲ್ಲಿ ಅವರು ಮೈದಾನದಲ್ಲೇ ರಕ್ತ ವಾಂತಿ ಮಾಡಿಕೊಂಡಿದ್ದರೂ ವಿಶ್ರಾಂತಿ ಪಡೆಯದೆ ಕೆಚ್ಚೆದೆಯಿಂದ ಆಡಿದ್ದರು. ಅರ್ಹವಾಗಿಯೇ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಬಳಿಕ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ನಂತರ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದ ಅವರು, ಮರಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡುವುದು ಸಾಧ್ಯವಾಗಲಿಲ್ಲ. ಆದರೂ ಕ್ಯಾನ್ಸರ್ಪೀಡಿತರಾಗುವುದಕ್ಕೂ ಮೊದಲು ಮಾಡಿದ್ದ ಅತ್ಯದ್ಭುತ ಸಾಧನೆಗಳಿಂದಲೇ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಸ್ಥಾನ ಪಡೆದಿದ್ದಾರೆ.
ಇನ್ನಷ್ಟು ಸುದ್ದಿಗಳು…
ನಿನ್ನಿಂದಲೇ ನನ್ನ ಜೀವನ ಪರಿಪೂರ್ಣ: 4ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭ ಅನುಷ್ಕಾ ಬಗ್ಗೆ ವಿರಾಟ್ ಮೆಚ್ಚುಗೆ
Rajinikanth Birthday: ಸೂಪರ್ ಸ್ಟಾರ್ ರಜನಿಕಾಂತ್ಗೆ ಪ್ರಧಾನಿ ಮೋದಿ, ಸಚಿನ್ ಸೇರಿ ಗಣ್ಯರಿಂದ ಶುಭಾಶಯ
Discussion about this post