Movie News: ಕೊಲೆ ಕೇಸ್ನಲ್ಲಿ ದರ್ಶನ್ ತುಗೂದೀಪ್ ಶ್ರೀನಿವಾಸ್ ಜೈಲು ಪಾಲಾಗಿದ್ದಾರೆ. ಪವಿತ್ರ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಹಾಕಿದ್ದ. ಕಾಮೆಂಟ್ಸ್ ಹಾಕ್ತಿದ್ದ. ಕೆಟ್ಟ ಕೆಟ್ಟ ಫೋಟೋ ಕಳಿಸುತ್ತಿದ್ದ ಎಂಬ ಕಾರಣ, ಆತನನ್ನು ಚಿತ್ರದುರ್ಗದಿಂದ, ಬೆಂಗಳೂರಿಗೆ ಪುಸಲಾಯಿಸಿ, ಕರೆತಂದು, ಹಿಗ್ಗಾಮುಗ್ಗಾ ಹಲ್ಲೆ ಮಾಡಿ, ಕೊಲೆ ಮಾಡಿ ಬಿಸಾಕಿದ್ದಾರೆ.
ಇದೀಗ ಬರೀ ದರ್ಶನ್- ಪವಿತ್ರಾ ಗೌಡ ಜೈಲು ಸೇರಿರುವುದಲ್ಲದೇ, ಅವರ ಮಕ್ಕಳು ಕೂಡ ಸಮಾಜದಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗಿದೆ. ಪವಿತ್ರಾ ಗೌಡಗೆ ಓರ್ವ ಮಗಳಿದ್ದು, ಆಕೆ ಇಂದು ಜೈಲಿಗೆ ತಾಯಿಯನ್ನು ನೋಡಲು ಬಂದಿದ್ದರು. ಈ ಬಗ್ಗೆ ಮಾಧ್ಯಮದಲ್ಲಿ ಸುದ್ದಿಯಾದ ಕಾರಣ, ಜನರಲ್ಲಿ ಮನವಿ ಮಾಡಿರುವ ಪವಿತ್ರಾಳ ಮೊದಲ ಪತಿ ಸಂಜಯ್ ಸಿಂಗ್, ಯಾವುದೇ ಕಾರಣಕ್ಕೂ ಈ ಪ್ರಕರಣದಲ್ಲಿ ಮಗಳನ್ನು ಮಾತ್ರ ಸಿಲುಕಿಸಬೇಡಿ ಎಂದಿದ್ದಾಾರೆ.
ಮಗಳು ಇನ್ನು ಶಾಲೆಗೆ ಹೋಗುತ್ತಿದ್ದಾಳೆ. ಆಕೆಯನ್ನು ಆಕೆಯ ಪಾಡಿಗೆ ಬಿಟ್ಟುಬಿಟಿ. ಈ ಪ್ರಕರಣದಲ್ಲಿ ನನ್ನ ಹೆಸರು ಅಥವಾ ಪವಿತ್ರಾಳ ಹೆಸರು ಬಂದರೂ ಸರಿ. ಆದರೆ ಮಗಳನ್ನು ಮಾತ್ರ ಸುದ್ದಿಗೆಳೆದು ತರಬೇಡಿ ಎಂದು ಮನವಿ ಮಾಡಿದ್ದಾರೆ. ದಯವಿಟ್ಟು ನನ್ನ ಮಗಳಿಗೆ ಟಾರ್ಚರ್ ಕೊಡುವುದು ನಿಲ್ಲಿಸಿ. ಆಕೆ ಹೀಗೆ ಸುದ್ದಿಯಾದರೆ, ಆಕೆಯ ಭವಿಷ್ಯ ಹಾಳಾಗುತ್ತದೆ. ಆಕೆಗಿನ್ನು ಚಿಕ್ಕ ವಯಸ್ಸು, ಓದುವ ವಯಸ್ಸು. ಈಗಾಗಲೇ ಆಕೆ ಅಪ್ಪ ಅಮ್ಮನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾಳೆ. ಆಕೆ ಶಾಲೆಗೆ ಹೋದಾಗ, ಆಕೆಯ ಸ್ನೇಹಿತರು ಈ ಬಗ್ಗೆ ಕಾಮೆಂಟ್ ಮಾಡಬಹುದು. ಇದರಿಂದ ಆಕೆ ಮನನೊಂದು ಏನು ಬೇಕಾದ್ರೂ ಮಾಡಿಕೊಳ್ಳಬಹುದು. ಹಾಗಾಗಿ ದಯವಿಟ್ಟು ಮಗಳನ್ನು ಮಾತ್ರ ಈ ವಿಷಯದಲ್ಲಿ ತರಬೇಡಿ ಎಂದು ಸಂಜಯ್ ಸಿಂಗ್ ಮನವಿ ಮಾಡಿದ್ದಾರೆ.
ಒಂದು ದಿನಕ್ಕೆ 17 ಸಾವಿರ ರೂ. ಬಾಡಿಗೆ ಕೊಟ್ಟು ಹೊಟೇಲ್ ರೂಂನಲ್ಲಿ ತಂಗಿದ್ದ ಮಹಿಳೆಗೆ ಕಾದಿತ್ತು ಶಾಕ್
Discussion about this post