Spiritual: ಆಹಾರ ಸೇವನೆ ಮಾಡುವುದು ನಮ್ಮ ಜೀವನದ ಒಂದು ಭಾಗ. ಊಟಕ್ಕಾಗಿಯೇ ಮನುಷ್ಯ ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತಾನೆ. ಆದರೆ ನೀವು ಆಹಾರ ಸೇವನೆ ಮಾಡುವಾಗ, ಮಾಡುವ ಕೆಲ ತಪ್ಪುಗಳಿಂದಲೇ ನಿಮ್ಮ ನೆಮ್ಮದಿ ಹಾಳಾಗಬಹುದು, ನಿಮ್ಮ ಆರ್ಥಿಕ ಪರಿಸ್ಥಿತಿಯೂ ಹಾಳಾಗಬಹುದು, ಸಂಬಂಧವೂ ಹಾಳಾಗಬಹುದು ಎಂಬುದನ್ನು ತಿಳಿದಿದ್ದೀರಾ..? ಖಂಡಿತ ಇವೆಲ್ಲವೂ ಆಗುತ್ತದೆ. ಹಾಗಾಗಿ ನಾವಿಂದು ಆಹಾರ ಸೇವಿಸುವಾಗ ಯಾವ ವಿಷಯವನ್ನು ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ..
Chanakya Neeti: ಈ ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ನೀವಂದುಕೊಂಡಿದ್ದನ್ನು ಸಾಧಿಸಬಹುದು
ಮೊದಲನೇಯ ವಿಚಾರ: ನಾವು ಊಟ ಮಾಡುವಾಗ ನೆಲದ ಮೇಲೆ, ಚಟ್ಟೆಮುಟ್ಟೆ ಹಾಕಿಕೊಂಡು ಕುಳಿತು ಊಟ ಮಾಡಬೇಕು. ಇದು ನಿಜವಾದ ಊಟ ಮಾಡುವ ವಿಧಾನ. ಇದರಿಂದ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಡೈನಿಂಗ್ ಟೇಬಲ್ ಬಳಸಿ ಊಟ ಮಾಡುವುದು, ಶೋಕಿಯಷ್ಟೇ. ಇದರ ಅವಶ್ಯಕತೆ ವಯಸ್ಸಾದವರಿಗೆ, ಮತ್ತು ಗರ್ಭಿಣಿಯರಿಗೆ ಇರುತ್ತದೆ. ಆದರೆ ವಯಸ್ಸಾದವರು, ಗರ್ಭಿಣಿಯರು ಕೂಡ, ನೆಲದ ಮೇಲೆ ಕುಳಿತು ಊಟ ಮಾಡಿದರೆ, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೇ, ಮಾನಸಿಕ ನೆಮ್ಮದಿಗೂ ಉತ್ತಮ.
ಎರಡನೇಯ ವಿಚಾರ: ಊಟಕ್ಕೆ ಕುಳಿತಾಗ ಮಾತನಾಡಬಾರದು. ಹಿರಿಯರು ಹೇಳುವ ಪ್ರಕಾರ, ನಾವು ಮಾತನಾಡದೇ, ಮೌನವಾಗಿ ಊಟ ಮಾಡಿದರೆ, ಅದು ನಾವು ಅನ್ನಪೂರ್ಣೆಗೆ ಕೊಡುವ ಗೌರವವಂತೆ. ಹಾಗಾಗಿ ಊಟಕ್ಕೆ ಕುಳಿತಾಗ ಮೌನವಾಗಿ ಊಟ ಮಾಡಿ ಏಳಬೇಕು. ಇದರಿಂದ ಆಗುವ ಇನ್ನೊಂದು ಲಾಭವೆಂದರೆ, ಊಟ ಮಾಡುವಾಗ ಮಾತನಾಡಿದರೆ, ತಿಂದ ಅನ್ನದ ಪ್ರಯೋಜನ ಅರ್ಧ ಸಿಗುತ್ತದೆ. ಒಂದು ಬಾರಿಗೆ ಮಾತನಾಡಬೇಕು ಅಥವಾ ಊಟ ಮಾಡಬೇಕು. ಎರಡನ್ನೂ ಒಟ್ಟಿಗೆ ಮಾಡಿದರೆ, ಬೇಗ ಆರೋಗ್ಯ ಹಾಳಾಗುತ್ತದೆ. ಹಾಗಾಗಿಯೇ ಕೆಲ ಬ್ರಾಹ್ಮಣರು, ಊಟಕ್ಕೆ ಕುಳಿತಾಗ ಮೌನವಾಗಿ ಇರುತ್ತಾರೆ. ಏನಾದರೂ ಬೇಕಾದರೆ, ಸನ್ನೆಯಲ್ಲೇ ಹೇಳುತ್ತಾರೆ. ಇದು ಆರೋಗ್ಯಕರ ಲಾಭ ಪಡೆಯುವ ವಿಧಾನ.
ಪವಾಡ ಪುರುಷ ಕೊರಗಜ್ಜನ ಮಹಿಮೆ ಬಲ್ಲಿರೇನು..? ತಪ್ಪು ಮಾಡಿದವರಿಗೆ ಕೊಟ್ಟ ಶಿಕ್ಷೆ ಎಂಥದ್ದು ಗೊತ್ತಾ..?
ಮೂರನೇಯ ವಿಚಾರ: ಮುರಿದ ತಟ್ಟೆಯಲ್ಲಿ ಊಟ ಮಾಡಬಾರದು. ಕೆಲವರ ಮನೆಯಲ್ಲಿ ಹೆಚ್ಚು ದುಡ್ಡು ಕೊಟ್ಟು ತಂದಿರುವ ತಟ್ಟೆ ಕೊಂಚ ಮುರಿದಿದ್ದರೆ, ಅದನ್ನೇ ಬಳಸುತ್ತಾರೆ. ಯಾಕಂದ್ರೆ ಹೆಚ್ಚು ದುಡ್ಡುಕೊಟ್ಟು ತಂದ ತಟ್ಟೆ ಎಂಬ ಕಾರಣಕ್ಕೆ. ಆದರೆ ತಟ್ಟೆ ಎಷ್ಟೇ ಕಾಸ್ಟ್ಲಿಯಾಗಿದ್ದರೂ, ಗೋಲಾಕಾರದಲ್ಲಿ ಗಟ್ಟಿಯಾಗಿ, ಸರಿಯಾಗಿ ಇರಬೇಕು. ಮುರಿದ ತಟ್ಟೆಯಲ್ಲಿ, ಸೀಳು ಬಿದ್ದ ತಟ್ಟೆಯಲ್ಲಿ ಉಂಡರೆ, ಆರೋಗ್ಯ ಹಾಳಾಗುತ್ತದೆ. ಅಲ್ಲದೇ, ಅನ್ನಪೂರ್ಣೆಯ ಕೃಪೆ ನಮ್ಮ ಮೇಲಿರುವುದಿಲ್ಲ. ಅಲ್ಲದೇ, ಆ ಮನೆಯಲ್ಲಿ ದರಿದ್ರವೇ ಸಂಭವಿಸುತ್ತದೆ. ಸದಾ ಗಲಾಟೆಯಾಗುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ.
ನೆಲಕ್ಕೆ ಬಿದ್ದ ಆಹಾರವನ್ನು ಹೆಕ್ಕಿ ತಿನ್ನಬೇಡಿ: ಮೊದಲಿನಿಂದಲೂ ಬಡತನ ಕಂಟುಬಂದವರು, ಅನ್ನದ ಬೆಲೆ ತಿಳಿದವರು ಅನ್ನವನ್ನು ವೇಸ್ಟ್ ಮಾಡುವುದಿಲ್ಲ. ಹಾಗಾಗಿ ನೆಲಕ್ಕೆ ಬಿದ್ದ ಯಾವುದೇ ಆಹಾರವನ್ನು ಅವರು ಹೆಕ್ಕಿ ತಿನ್ನುತ್ತಾರೆ. ಆದರೆ ಇದು ತಪ್ಪು. ಹೀಗೆ ಮಾಡುವುದರಿಂದ ದಾರಿದ್ರ್ಯತೆ ಹೆಚ್ಚುತ್ತದೆ. ಅಲ್ಲದೇ, ನೆಲಕ್ಕೆ ಬಿದ್ದ ಆಹಾರವನ್ನು ಸೇವಿಸಬಾರದು ಅಂತಾ ಹೇಳುವುದೇಕೆ ಎಂದರೆ, ಆ ಆಹಾರ ಪ್ರೇತದ ಪಾಲಾಗಿರುತ್ತದೆ. ಹಾಗಾಗಿ ನಾವು ಅದನ್ನು ಸೇವಿಸಿದರೆ, ಆರೋಗ್ಯ ಸಮಸ್ಯೆ, ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಅಲ್ಲದೇ, ಈ ತಪ್ಪಿನಿಂದ ನಾವೆಂದೂ ಜೀವನದಲ್ಲಿ ಉದ್ಧಾರವಾಗುವುದಿಲ್ಲ.
ಕೂದಲು ಬಿದ್ದಿರುವ ಆಹಾರವನ್ನು ಸೇವಿಸಬಾರದು. ಊಟ ಮಾಡುವಾಗ ಕೂದಲು ಸಿಕ್ಕರೆ ಅಂಥ ಆಹಾರವನ್ನು ಸೇವಿಸಬಾರದು ಅನ್ನೋ ನಿಯಮವಿದೆ.
ಒಂದೇ ತಟ್ಟೆಯಲ್ಲಿ ಯಾರೂ ಊಟ ಮಾಡಬಾರದು. ಅದು ಪತಿ- ಪತ್ನಿಯೇ ಆಗಲಿ, ತಾಯಿ ಮಗುವೇ ಆಗಲಿ. ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ, ಆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಅಲ್ಲದೇ, ವೈಜ್ಞಾನಿಕವಾಗಿ ಇದನ್ನು ನೋಡಿದಾಗ, ಆರೋಗ್ಯದ ದೃಷ್ಟಿಯಿಂದಲೂ ಹೀಗೆ ಮಾಡಬಾರದು.
Discussion about this post