Spiritual: ಚಾಣಕ್ಯ ನೀತಿ ಅಂದ್ರೆನೇ ಜೀವನ ಪಾಠ ಇದ್ದಂಗೆ. ಚಾಣಕ್ಯ ನೀತಿಯನ್ನು ಯಾರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ, ಅವರಿಗೆ ಎಂದಿಗೂ ಅವಮಾನವಾಗುವುದಿಲ್ಲ. ಸೋಲಾಗುವುದಿಲ್ಲ. ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಯಾವ ರೀತಿ ಇರಬೇಕು..? ದುಡ್ಡು ಖರ್ಚು ಮಾಡುವಾಗ, ಯಾವ ನಿಯಮ ಪಾಲಿಸಬೇಕು..? ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಬೇಕು ಅಂದ್ರೆ ಹೇಗಿರಬೇಕು..? ಯಾವ ಸ್ಥಳದಲ್ಲಿ ಇರಬೇಕು ಮತ್ತು ಯಾವ ಸ್ಥಳದಲ್ಲಿ ಇರಬಾರದು. ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು ಜೀವನದಲ್ಲಿ ಯಶಸ್ವಿಯಾಗಬೇಕು ಅಂದ್ರೆ ನಾವು ಯಾವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಅಂತ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಡಿ ಮಾರ್ಟ್ನಲ್ಲಿ ವಸ್ತುಗಳು ಕಡಿಮೆ ಬೆಲೆಗೆ ಸಿಗಲು ಕಾರಣವೇನು ಗೊತ್ತಾ..?
ಮಾತಿನ ಮೇಲೆ ಹಿಡಿತವಿರಲಿ: ನಾವಾಡುವ ಮಾತಿನಿಂದ ಎದುರಿಗೆ ಇರುವವರು ಖುಷಿಯಾಗಬೇಕು ಅಥವಾ ಸಮಾಧಾನವಾಗಿರಬೇಕು. ಆಗ ಅವರಿಗೆ ನಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ. ಅದೇ ನಾವಾಡುವ ಮಾತು ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸುವಂತಿದ್ದರೆ, ಅವರು ನಮಗೆಂದೂ ಗೌರವ ಕೊಡುವುದಿಲ್ಲ. ಒಂದೊಮ್ಮೆ ಮಾತಿನಲ್ಲಿ ಗೌರವಿಸಿದರೂ, ಮನಸ್ಸಿನಲ್ಲಿ ನಿಮ್ಮ ಬಗ್ಗೆ ಅವರಿಗೆ ಗೌರವವಿರುವುದಿಲ್ಲ. ಹಾಗಾಗಿ ನೀವು ಎಲ್ಲರ ಬಳಿ ಸೌಮ್ಯವಾಗಿ ಮಾತನಾಡಿದರೆ, ಅಥವಾ ಗಾಂಭೀರ್ಯದಿಂದ, ಧೈರ್ಯದಿಂದ ಮಾತನಾಡಿದರೆ, ಅದು ನಿಮ್ಮ ಗೌರವನ್ನು ಹೆಚ್ಚಿಸುತ್ತದೆ. ಮತ್ತು ವ್ಯಂಗ್ಯವಾದ ಮಾತು ನಿಮ್ಮ ಮೇಲಿನ ಗೌರವವನ್ನು ತಗ್ಗಿಸುತ್ತದೆ. ಮತ್ತು ಹೀಗೆ ವ್ಯಂಗ್ಯವಾಗಿ, ಇನ್ನೊಬ್ಬರ ಮನಸ್ಸನ್ನು ನೋಯಿಸಿ, ಮಾತನಾಡುವವರಿಗೆ ಯಾರೂ ಕೂಡ ಪ್ರೀತಿ, ಕಾಳಜಿ, ಗೌರವ ಏನನ್ನೂ ನೀಡುವುದಿಲ್ಲ.
ನೀವು ಮಾಡುತ್ತಿರುವ ಕೆಲಸದ ಬಗ್ಗೆ ಹೆಚ್ಚು ಕೊಚ್ಚಿಕೊಳ್ಳದೇ ಇರುವುದು: ಮೌನವಾಗಿ ಕೆಲಸ ಮಾಡಿ, ನಿಮ್ಮ ಯಶಸ್ಸು ಸದ್ದು ಮಾಡಲಿ ಎಂದು ಹಿರಿಯರು ಹೇಳುತ್ತಾರೆ. ಅದೇ ರೀತಿ ನೀವು ಮೌನವಾಗಿ ಕೆಲಸ ಮಾಡಬೇಕು. ನಿಮಗೆ ಆ ಕೆಲಸದಲ್ಲಿ ಯಶಸ್ಸು ಸಿಕ್ಕಾಗಲೇ, ಜನರಿಗೆ ನೀವು ಇಂಥ ಕೆಲಸ ಮಾಡುತ್ತಿದ್ದೀರಿ ಎಂದು ಗೊತ್ತಾಗಬೇಕು. ಉದಾಹರಣೆಗೆ ಏನೋ ಒಂದು ಉದ್ಯಮ ಶುರು ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಅದರಲ್ಲಿ ನೀವು ಯಶಸ್ವಿಯಾಗುವವರೆಗೂ ನೀವು ಆ ಬಗ್ಗೆ ಯಾರಿಗೂ ಹೇಳಬಾರದು. ಹಾಗೇನಾದರೂ ಮಾಡಿದರೆ, ನಿಮ್ಮ ಏಳಿಗೆಯನ್ನು ಸಹಿಸದ ಜನ, ನಿಮ್ಮ ಉದ್ಯಮವನ್ನು ಹಾಳು ಮಾಡಲು ಯತ್ನಿಸುತ್ತಾರೆ.
ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..
ಸಾಯುವವರೆಗೂ ಕಲಿಯುತ್ತಲೇ ಇರಬೇಕು: ಶಾಲೆ, ಕಾಲೇಜಿಗೆ ಹೋಗಿ ಕಲಿಯುವುದು ಒಂದೆಡೆಯಾದರೆ, ಜೀವನ ಪಾಠ ಕಲಿಯುವುದು ಮತ್ತೊಂದೆಡೆ. ಕಾಲೇಜು ಕಲಿತು ಮುಗಿಯಿತು. ಕೆಲಸವೂ ಸಿಕ್ಕಿತೆಂದು ನೀವು ಕಲಿಯುವುದನ್ನು ಬಿಡಬಾರದು. ಸಾವು ಬರುವವರೆಗೂ ಹೊಸ ಹೊಸ ವಿಷಯಗಳನ್ನು ಕಲಿಯುತ್ತಲೇ ಇರಬೇಕು.
ಹಣ ಬಳಸುವ ಬುದ್ಧಿ: ಹಣವನ್ನು ಹೇಗೆ ಬಳಸಬೇಕು. ಎಷ್ಟು ಖರ್ಚು ಮಾಡಬೇಕು. ಯಾವ ರೀತಿ ಹಣವನ್ನು ಬಳಸಬೇಕು. ಹಣ ಹೇಗೆ ಕೂಡಿಡಬೇಕು. ಯಾವುದರಲ್ಲಿ ಹಣವನ್ನು ಇನ್ವೆಸ್ಟ್ ಮಾಡಬೇಕು ಅನ್ನೋ ಬಗ್ಗೆ ಓರ್ವ ವ್ಯಕ್ತಿಗೆ ಚೆನ್ನಾಗಿ ಗೊತ್ತಿರಬೇಕು. ಆಗಲೇ ಆತ ಯಶಸ್ವಿಯಾಗಲು ಸಾಧ್ಯ.
ಸಂಬಂಧ ನಿಭಾಯಿಸುವ ಬುದ್ಧಿ: ಓರ್ವ ವ್ಯಕ್ತಿಗೆ ಸಮಾಜದಲ್ಲಿ ಗೌರವ, ಹಣ, ನೆಮ್ಮದಿ, ಐಷಾರಾಮಿ ಜೀವನ ಎಲ್ಲವೂ ಎಷ್ಟು ಮುಖ್ಯವೋ, ಮನೆಯಲ್ಲಿನ ಸಂಬಂಧವೂ ಅಷ್ಟೇ ಮುಖ್ಯ. ನೀವು ಸಮಾಜದಲ್ಲಿ ಗೌರವ, ಹಣ ಸಂಪಾದಿಸಿದರೂ ಕೂಡ, ಮನೆಯಲ್ಲಿನ ಸಂಬಂಧಗಳು ಸರಿಯಾಗಿ ನಿಭಾಯಿಸಿಲ್ಲವೆಂದಲ್ಲಿ ನಿಮಗೆ ಯಶಸ್ಸು, ನೆಮ್ಮದಿ ಸಿಗಲು ಸಾಧ್ಯವೇ ಇಲ್ಲ.
ನಾಭಿ (ಹೊಕ್ಕಳಿಗೆ) ಎಣ್ಣೆ ಹಾಕಿದ್ರೆ ಏನಾಗತ್ತೆ ಗೊತ್ತಾ..? Belly Button Oiling ಬಗ್ಗೆ ಕೇಳಿದ್ದೀರಾ?
ಕಷ್ಟಪಡುವ ಬುದ್ಧಿ: ಯಾರಿಗೆ ಕಷ್ಟಪಡದೇ ಹಾಗೆ ಸುಖ ಸಿಗಬೇಕು ಎನ್ನುವ ಬುದ್ಧಿ ಇರುತ್ತದೆಯೋ, ಅಂಥವರಿಗೆ ಎಂದಿಗೂ ಸುಖವಾಗಿರುವ ಯೋಗ ಕೂಡಿ ಬರುವುದಿಲ್ಲ. ಹಾಗಾಗಿಯೇ ಕಷ್ಟಪಟ್ಟು ದುಡಿಯಬೇಕು ಅಂತಾ ಹೇಳೋದು. ಕಷ್ಟ ಪಟ್ಟಷ್ಟು ನಮಗೆ ಸಿಗುವ ಫಲ ಸಿಹಿಯಾಗಿರುತ್ತದೆ.
ದಿನ ನಿರ್ವಹಿಸುವ ಬುದ್ಧಿ: ದಿನ ನಿರ್ವಹಿಸುವುದು ಎಂದರೆ, ಯಾವ ದಿನ ಯಾವ ಕೆಲಸ ಪೂರ್ಣಗೊಳಿಸಬೇಕೋ, ಅದನ್ನು ಅಂದೇ ಪೂರ್ಣಗೊಳಿಸುವ ಬುದ್ಧಿ. ಯಾವುದೇ ಕೆಲಸವಾಗಲಿ, ನಾಳೆ ಮಾಡುತ್ತೇನೆ, ನಾಡಿದ್ದು ಮಾಡುತ್ತೇನೆ, ಮತ್ಯಾವಾಗಲಾದ್ರೂ ಮಾಡಿದರಾಯಿತು ಎಂದು ಮುಂದೂಡುವವರು ಎಂದಿಗೂ ಉದ್ಧಾರವಾಗುವುದಿಲ್ಲ ಅಂತಾರೆ ಚಾಣಕ್ಯರು. ಹಾಗಾಗಿ ಯಾವುದಾದರೂ ಕೆಲಸ ಮಾಡಲೇಬೇಕು ಎಂದುಕೊಂಡಿದ್ದರೆ, ಅಂಥ ಕೆಲಸವನ್ನು ಅಂದೇ, ಆ ಕ್ಷಣವೇ ಮಾಡಿ ಮುಗಿಸಲು ಪ್ರಯತ್ನಿಸಿ. ಕೆಲಸ ಮುಂದೂಡಿದರೆ, ನೀವೆಂದೂ ಉದ್ಧಾರವಾಗುವುದಿಲ್ಲ ಎನ್ನುತ್ತಾರೆ ಚಾಣಕ್ಯರು.
Discussion about this post