Horoscope: ನಾವಿವತ್ತು ಮಿಥುನ ರಾಶಿಯವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ.
- ಮಿಥುನ ರಾಶಿಯ ಅಧಿಪತಿ ಬುಧನಾಗಿದ್ದಾನೆ. ಅಂದರೆ ಬುಧ ಗ್ರಹ. ಹೀಗಾಗಿ ಈ ರಾಶಿಯ ಜನ ಬುದ್ಧಿವಂತರು ಮತ್ತು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ತಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಮುಗಿಸುವ ಸಾಮರ್ಥ್ಯ ಮತ್ತು ಸ್ವಭಾವ ನಿಮ್ಮದಾಗಿರುತ್ತದೆ.
- ಬುಧಗ್ರಹ ನಿಮ್ಮ ರಾಶಿಯ ಅಧಿಪತಿಯಾಗಿರುವುದರಿಂದ ನೀವು ಹೆಚ್ಚಾಗಿ ಶಿಕ್ಷಣ ಕಲಿಯದಿದ್ದರೂ, ಬುದ್ಧಿವಂತರಾಗಿರುತ್ತೀರಿ. ನಿಮ್ಮ ಮಾತನಾಡುವ ಶೈಲಿ ಕೂಡ ಶಿಕ್ಷಿತರಂತೆ ಇರುತ್ತದೆ.
ಹನುಮಾನ್ ಚಾಲೀಸಾ ರಚಿಸಿದ್ದು ಯಾವ ಪರಿಸ್ಥಿತಿಯಲ್ಲಿ? ತುಳಸಿದಾಸರು ಜೈಲಿಗೆ ಹೋಗಲು ಕಾರಣವೇನು?
- ನಿಮ್ಮ ಶಕ್ತಿವಂತರೂ, ಧೈರ್ಯಶಾಲಿಗಳೂ ಆಗಿರುತ್ತೀರಿ. ಆದ್ರೆ ನಿಮ್ಮದು ಸಾತ್ವಿಕ ಸ್ವಭಾವವಾಗಿರುವುದರಿಂದ ಜನ ನಿಮ್ಮನ್ನು ಸಾಧು ಸ್ವಭಾವದವರು, ಪಾಪದವರು ಎಂದುಕೊಳ್ಳುತ್ತಾರೆ. ಕೆಲ ಘಟನೆಗಳು ಜರುಗಿದಾಗಲೇ ನೀವು ಧೈರ್ಯಶಾಲಿಗಳು ಎನ್ನುವ ವಿಷಯ ಇತರರಿಗೆ ತಿಳಿಯುತ್ತದೆ.
- ನಿಮ್ಮದು ದ್ವಿಸ್ವಭಾವವಾಗಿದ್ದು, ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚಿನ ಕೆಲಸ ಮಾಡುವ ಯೋಚನೆಯೂ ನಿಮ್ಮ ತಲೆಗೆ ಬರುತ್ತದೆ. ಆದರೆ ನೀವು ಯಾವ ಕೆಲಸ ಮಾಡಿದರೂ ಅದರಲ್ಲಿ ಹೊಸತನವನ್ನು ಹುಡುಕುವ ಪ್ರಯಾಸವನ್ನ ನೀವು ಮಾಡುತ್ತಲೇ ಇರುತ್ತೀರಿ.
ಗಂಗಾಮಾತೆ ತನಗೆ ಹುಟ್ಟಿದ 7 ಮಕ್ಕಳನ್ನು ನದಿಗೆಸೆಯಲು ಕಾರಣವೇನು..?
- ನಿಮ್ಮ ಮಾತು ಚಂದವಾಗಿರುವ ಕಾರಣ ಮತ್ತು ನೀವು ವಿನಮೃವಾಗಿ ಮಾತನಾಡುವ ಕಾರಣ ನಿಮ್ಮ ಸ್ನೇಹಿತರ ಸಂಖ್ಯೆ ಹೆಚ್ಚಾಗಿರುತ್ತದೆ. ಸ್ನೇಹಿತರೊಂದಿಗೆ ಹರಟೆ ಹೊಡೆಯುವುದು, ಎಂಜಾಯ್ ಮಾಡುವುದೆಂದರೆ ನಿಮಗೆ ತುಂಬಾ ಇಷ್ಟದ ಕೆಲಸವಾಗಿದೆ.
- ಇನ್ನು ನಿಮ್ಮ ಬುದ್ಧಿ ಮತ್ತೆ ಚುರುಕಾಗಿದ್ದು, ನೀವು ಕಷ್ಟಪಟ್ಟು ದುಡಿಯುವುದಕ್ಕಿಂತ ಹೆಚ್ಚಾಗಿ, ಬುದ್ಧಿ ಉಪಯೋಗಿಸಿ ಕೆಲಸ ಮಾಡಿ ಯಶಸ್ಸು ಕಾಣಲು ಬಯಸುತ್ತೀರಿ.
ಫೆಬ್ರವರಿಯಲ್ಲಿ ಹುಟ್ಟಿದವರು ಈ ಕೆಲಸ ಮಾಡದಿದ್ದಲ್ಲಿ, ಕಷ್ಟ ಕಟ್ಟಿಟ್ಟ ಬುತ್ತಿ
- ನಾಯಕತ್ವದ ಗುಣ ಹೊಂದಿರುವ ಮಿಥುನ ರಾಶಿಯವರು, ತಮ್ಮ ಕೈ ಕೆಳಗೆ ಕೆಲಸ ಮಾಡುವವರನ್ನ ತುಂಬ ತಾಳ್ಮೆಯಿಂದ ನಡೆಸಿಕೊಳ್ಳುತ್ತಾರೆ. ಅವರ ಮೇಲೆ ಕೋಪಮಾಡಿಕೊಂಡು ಕೆಲಸ ಹಾಳು ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಇದೇ ಕಾರಣಕ್ಕೆ ಮಿಥುನ ರಾಶಿಯವರ ಕೈ ಕೆಳಗೆ ಕೆಲಸ ಮಾಡುವವರು, ಶ್ರದ್ಧೆ-ಕಾಳಜಿಯಿಂದ ಕೆಲಸ ಮಾಡುತ್ತಾರೆ.
- ಸಾಮ, ಧಾಮ, ದಂಡ ಭೇಧ ಎಲ್ಲವನ್ನೂ ಪ್ರಯೋಗಿಸಿ ಕೆಲಸ ಮಾಡಿಸಿಕೊಳ್ಳುವುದನ್ನೂ ತಿಳಿದುಕೊಂಡಿರುವ ನಿಮಗೆ, ಯಾರನ್ನ ಹೇಗೆ ಪಳಗಿಸಿ ಕೆಲಸ ಮಾಡಿಸಿಕೊಳ್ಳಬೇಕೆಂದು ಗೊತ್ತಿರುತ್ತದೆ.
ವೃಷಭ ರಾಶಿಯವರು ಯಾವ ಗುಣವನ್ನು ಬಿಟ್ಟರೆ ಉದ್ಧಾರವಾಗುತ್ತಾರೆ..?
- ನಿಮ್ಮಲ್ಲಿ ಸಾಧಾರಣತೆ ಇದ್ದರೂ, ನೀವು ಆಕರ್ಷಕವಾಗಿ ಕಾಣುತ್ತೀರಿ. ಸುತ್ತಾಡುವುದು, ಚಂದವಾಗಿ ಬಟ್ಟೆ ತೊಡುವುದು, ರುಚಿ ರುಚಿ ಆಹಾರ ಸೇವಿಸುವುದು ನಿಮಗೆ ಇಷ್ಟದ ಕೆಲಸವಾಗಿದೆ.
- ಇನ್ನು ನಿಮ್ಮಲ್ಲಿ ಕಾಣುವ ಅತ್ಯುತ್ತಮ ಗುಣವೆಂದರೆ, ನೀವು ವ್ಯರ್ಥ ಹಣ ಖರ್ಚು ಮಾಡುವುದಿಲ್ಲ. ಮತ್ತು ದುಡ್ಡು ಗಳಿಸುವುದು ನಿಮ್ಮ ಧ್ಯೇಯವಾದರೂ ಕೂಡ, ನಿಯತ್ತಾಗೇ ಅದನ್ನ ಗಳಿಸುತ್ತೀರಿ. ಮತ್ತು ನೀವು ಲಕ್ಗಿಂತ ಹೆಚ್ಚು, ನಿಮ್ಮ ಪ್ರಯತ್ನದಲ್ಲಿ ನಂಬಿಕೆ ಇಡುತ್ತೀರಿ. ಅಲ್ಲದೇ ಎಲ್ಲಿ ಹೋದರೂ ಅಲ್ಲಿ ಜೀವನ ಕಟ್ಟಿಕೊಳ್ಳುವ ಯೋಗ್ಯತೆ ನಿಮಗಿರುತ್ತದೆ.
ಜನವರಿಯಲ್ಲಿ ಜನಿಸಿದವರು ತಿಳಿಯಲೇಬೇಕಾದ ವಿಷಯಗಳಿದು
- ಆದರೆ ನೀವು ಮೋಜು ಮಸ್ತಿ ಮಾಡುವ ಭರದಲ್ಲಿ ಆಲಸ್ಯವನ್ನು ತಂದುಕೊಳ್ಳುತ್ತೀರಿ. ಮತ್ತು ಇದು ನಿಮ್ಮ ಯಶಸ್ಸಿನ ದಾರಿಗೆ ಅಡ್ಡವಾಗುತ್ತದೆ. ಆಲಸ್ಯವನ್ನು ಬಿಟ್ಟರೆ, ಯಶಸ್ಸು ನಿಮ್ಮದಾಗುತ್ತದೆ. ಇಂದು ಮಾಡುವ ಕೆಲಸವನ್ನು ನಾಳೆ ಮಾಡೋಣ, ನಾಡಿದ್ದು ಮಾಡೋಣವೆಂದು ಹೇಳಿ, ಕೆಲಸವನ್ನು ಮುಂದೂಡುತ್ತ, ದಿನ ಹತ್ತಿರ ಬಂದಾಗ ಆ ಕೆಲಸವನ್ನು ಗಡಿಬಿಡಿಯಿಂದ ಮಾಡಿ ಮುಗಿಸುತ್ತೀರಿ. ಇದರಿಂದ ನಿಮ್ಮ ಯಶಸ್ಸು ಕುಂಠಿತಗೊಳ್ಳುತ್ತದೆ.
- ನಿಮಗೆ ಕೋಪ ಬಂದಾಗ, ನೀವು ಏನು ಮಾತನಾಡುತ್ತೀರಿ ಎಂಬುದು ನಿಮಗೆ ಗೊತ್ತಿರುವುದಿಲ್ಲ. ಹಾಗಾಗಿ ಬಾಯಿಗೆ ಬಂದದ್ದನ್ನ ಮಾತನಾಡಿ ಇತರರ ಕೆಂಗಣ್ಣಿಗೆ ಗುರಿಯಾಗುತ್ತೀರಿ. ಇಲ್ಲವಾದಲ್ಲಿ ಎದುರಿನವರಿಗೆ ನಿಮ್ಮ ಬಗ್ಗೆ ದ್ವೇಷ ಬರುವ ರೀತಿ ನಡೆದುಕೊಳ್ಳುತ್ತೀರಿ.
ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ
- ಹಸಿರು, ಬಿಳಿ, ನೀಲಿ ಮತ್ತು ಗುಲಾಬಿ ಬಣ್ಣ ಅದೃಷ್ಟದ ಬಣ್ಣಗಳಾಗಿದೆ. ರವಿವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಶುಭ ದಿನಗಳಾಗಿದೆ.1,3,5,6 ಶುಭ ಸಂಖ್ಯೆಗಳಾಗಿದೆ. ಜೀವನದಲ್ಲಿ ಹೆಚ್ಚಿನ ಸಫಲತೆ ಸಿಗಲು ನೀವು ಗಣಪತಿಯ ಪೂಜೆ ಮಾಡಬೇಕಾಗುತ್ತದೆ.
Discussion about this post