Horoscope: ನಾವಿವತ್ತು ವೃಷಭ ರಾಶಿಯವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ.
ಜನವರಿಯಲ್ಲಿ ಜನಿಸಿದವರು ತಿಳಿಯಲೇಬೇಕಾದ ವಿಷಯಗಳಿದು
- ನಿಮ್ಮ ಜಾತಕದ ಹೆಸರು ಈ ಉ ಎ ಓ ವಾ ವಿ ವು ವೆ ವೋ ಎಂಬ ಅಕ್ಷರದಿಂದ ಶುರುವಾದರೆ ನೀವು ವೃಷಭ ರಾಶಿಯವರಾಗಿರುತ್ತೀರಿ. ನಿಮ್ಮ ರಾಶಿಯ ಅಧಿಪತಿ ಶುಕ್ರನಾಗಿರುತ್ತಾನೆ. ಆಕರ್ಷಕ ವ್ಯಕ್ತಿತ್ವದವರಾದ ವೃಷಭ ರಾಶಿಯವರು, ತಮ್ಮ ಸುಂದರವಾದ ಕಣ್ಣುಗಳಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ..
- ಹಸನ್ಮುಖಿಯಾಗಿರುವ ವೃಷಭ ರಾಶಿಯವರು, ಸೌಮ್ಯ, ಶಾಂತ, ಭಾವುಕ, ಉದಾರ ಮನಸ್ಸಿನವರು ಮತ್ತು ಧೃಢ ಸ್ವಭಾವದವರು ಕೂಡ ಆಗಿದ್ದಾರೆ. ಅಲ್ಲದೇ ಪ್ರಭಾವಶಾಲಿ ಕೂಡ ಆಗಿದ್ದಾರೆ.
ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ
- ಅತ್ಯುತ್ತಮವಾದ ಜೀವನ ನಡೆಸಬೇಕೆಂದು ಬಯಸುವ ಇವರು, ಅದಕ್ಕಾಗಿ ನಿಯತ್ತಿನಿಂದ ಶ್ರಮಪಟ್ಟು ದುಡಿಯುತ್ತಾರೆ. ನಾಜೂಕಿನ ಸ್ವಭಾವದ ಇವರು, ಚಂದನಾಗಿ ಮಾತನಾಡುತ್ತಾರಲ್ಲದೇ, ಮಿತ, ಮಧುರ ಭಾಷಿಗಳಾಗಿರುತ್ತಾರೆ.
- ಸೌಂದರ್ಯಪ್ರಿಯರಾಗಿರುವ ವೃಷಭ ರಾಶಿಯವರು, ಸಂಗೀತ, ಕಲೆ ಸಾಹಿತ್ಯದಲ್ಲಿ ಆಸಕ್ತಿ ಉಳ್ಳವರಾಗಿರುತ್ತಾರೆ. ಸ್ವಚ್ಛತೆಯನ್ನ ಇಷ್ಟಪಡುವ ಇವರು, ತಾವು ಸ್ವಚ್ಛವಾಗಿರಲು ಮತ್ತು ತಮ್ಮ ಸುತ್ತಮುತ್ತಲು ಸ್ವಚ್ಛವಾದ ವಾತಾವರಣವಿರಿಸಲು ಇಚ್ಛಿಸುತ್ತಾರೆ. ತಮ್ಮ ಮನೆಯಾಗಿರಬಹುದು ಅಥವಾ ತಾವು ಕೆಲಸ ಮಾಡುವ ಕಛೇರಿಯೇ ಆಗಿರಬಹುದು, ಯಾವಾಗಲು ಸ್ವಚ್ಛವಾಗಿರಬೇಕು ಅಂತಾ ಇವರು ಬಯಸುತ್ತಾರೆ.
ಮುಸ್ಲಿಂರ ವೇಷ ಧರಿಸಿ, 124 ಮೇಕೆ ಖರೀದಿಸಿದ ಜೈನರು: ಇದರ ಹಿಂದಿದೆ ರೋಚಕ ಕಥೆ
- ಇಷ್ಟೇ ಅಲ್ಲದೇ, ಸ್ವಚ್ಛವಾದ ಹೊಳಪಾದ ಬಟ್ಟೆ ಧರಿಸುವುದು, ಚೆಂದದ ಆಭರಣ ಧರಿಸುವುದು, ಮೇಕಪ್ ಮಾಡಿಕೊಂಡು ನೀಟ್ ಆಗಿ ಕಾಣುವುದೆಂದರೆ ಇವರಿಗೆ ಬಲುಪ್ರೀತಿ. ಒಂಥವಾ ಜಾಲಿ ಸ್ವಭಾವದವರಾದ ಇವರು, ಕಷ್ಟಪಟ್ಟು ದುಡಿದಿದ್ದರಲ್ಲಿ ಅರ್ಧದಷ್ಟಾದರೂ ಇಂಥ ಶೋಕಿಗಾಗಿ ಬಳಸುತ್ತಾರೆ ಎನ್ನಬಹುದು.
- ಇನ್ನು ಸ್ನೇಹದ ವಿಷಯಕ್ಕೆ ಬಂದ್ರೆ ವೃಷಭ ರಾಶಿಯವರು, ವಿರುದ್ಧ ಲಿಂಗಗಳ ಜೊತೆ ಸ್ನೇಹ ಬೆಳೆಸಲು ಇಚ್ಚಿಸುತ್ತಾರೆ. ಹೆಣ್ಣು ಮಕ್ಕಳಾದರೆ, ಹುಡುಗರ ಜೊತೆ ಮತ್ತು ಗಂಡು ಮಕ್ಕಳಾದರೆ, ಹುಡುಗಿರಯ ಜೊತೆ ಹೆಚ್ಚು ಸ್ನೇಹ ಬೆಳೆಸಲು ಇಚ್ಛಿಸುತ್ತಾರೆ. ಮತ್ತು ಇದರಲ್ಲಿ ಯಶಸ್ಸು ಕೂಡಾ ಹೊಂದುತ್ತಾರೆ. ಯಾಕಂದ್ರೆ ವೃಷಭ ರಾಶಿಯವರ ಮಾತೇ ಹಾಗಿರುತ್ತದೆ. ಮೃದು, ಮಧುರ ಮತ್ತು ಮಿತವಾದ ಮಾತಿನಿಂದಲೇ ಅವರು ಎದುರಿನವರ ಗಮನ ಸೆಳೆಯುತ್ತಾರೆ.
ಒಂದು ದಿನಕ್ಕೆ 17 ಸಾವಿರ ರೂ. ಬಾಡಿಗೆ ಕೊಟ್ಟು ಹೊಟೇಲ್ ರೂಂನಲ್ಲಿ ತಂಗಿದ್ದ ಮಹಿಳೆಗೆ ಕಾದಿತ್ತು ಶಾಕ್
- ಇವರ ಇನ್ನೊಂದು ವಿಶೇಷ ಗುಣವೇನೆಂದರೆ ಇವರು, ಇತರ ರಾಶಿಗಿಂತಲೂ ಬಹುಬೇಗ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಇವರು ಜೀವನದಲ್ಲಿ ಬಹುಬೇಗ ಯಶಸ್ಸು ಹೊಂದುತ್ತಾರೆ.
- ಇನ್ನು ಕುಟುಂಬಸ್ಥರನ್ನ, ಸ್ನೇಹಿತರನ್ನ, ಜೀವನ ಸಂಗಾತಿಯನ್ನ ಪ್ರೀತಿ, ಕಾಳಜಿಯಿಂದ ಕಾಣುವ ಇವರು ಅವರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಇನ್ನು ಯಾವುದೇ ಕೆಲಸವನ್ನು ಮಾಡಲೇಬೇಕು ಎಂದು ಪಣತೊಟ್ಟರೆ, ಆ ಕೆಲಸವನ್ನು ಮಾಡಿಯೇ ಮುಗಿಸುತ್ತಾರೆ.
- ಆದರೆ ವೃಷಭ ರಾಶಿಯವರಲ್ಲಿ ಕಾಣುವ ಬೇಸರದ ವಿಷಯವೇನೆಂದರೆ ಇವರು ತಮಗೆ ಸಿಕ್ಕ ಚಿನ್ನದಂತ ಸಮಯವನ್ನ ವ್ಯರ್ಥಗೊಳಿಸುತ್ತಾರೆ. ತಮಗೆ ಸಿಕ್ಕ ಸಮಯವನ್ನು ಯಶಸ್ಸು ಪಡೆಯಲು ಉಪಯೋಗಿಸುವುದನ್ನ ಬಿಟ್ಟು ಶೋಕಿ ಮಾಡಲು, ನಿದ್ದೆ ಮಾಡಲು ಉಪಯೋಗಿಸುತ್ತಾರೆ.
ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!
- ಯಶಸ್ಸಿಗೆ ಬೇಕಾದ ನಿಯಮಗಳನ್ನು ಅನುಸರಿಸಲು ಆಲಸ್ಯತನ ತೋರುವ ಇವರು, ತಮಗೆ ಸಿಗುವ ಗೋಲ್ಡನ್ ಚಾನ್ಸ್ಗಳನ್ನ ಕಳೆಕೊಳ್ಳುತ್ತಲೇ ಇರುತ್ತಾರೆ. ನಂತರ ಆ ಬಗ್ಗೆ ವ್ಯಥೆ ಪಡುತ್ತಾರೆ. ಮತ್ತು ಕೆಲ ಕೆಲಸಗಳನ್ನು ಮಾಡಲು ಸೋಂಬೇರಿತನ ತೋರಿಸುವ ಇವರು, ಇನ್ನೇನು ಆ ಕೆಲಸ ಮಾಡಿ ಮುಗಿಸದೇ ಇದ್ದಲ್ಲಿ ಬೈಯ್ಯಿಸಿಕೊಳ್ಳುವುದು ಖಚಿತ ಎಂದು ಗೊತ್ತಾದಾಗಲೇ ಆ ಕೆಲಸವನ್ನು ಮಾಡುತ್ತಾರೆ.
ಕಿಚ್ಚನ ಮುಂದೆ ಪಟ್ಲ ಭಾಗವತರ ಮಕ್ಕಳ ಯಕ್ಷಗಾನ ನಾಟ್ಯ ಪ್ರದರ್ಶನ
- ಜೀವನವನ್ನ ಎಂಜಾಯ್ ಮಾಡಬೇಕೆಂಬ ಮನೋಭಾವ ಇರುವುದು ತಪ್ಪೇನಲ್ಲ ಆದ್ರೆ ಅದನ್ನೇ ರೂಢಿಸಿಕೊಂಡರೆ ಯಶಸ್ಸು ದಕ್ಕುವುದಿಲ್ಲ ಎಂಬ ಮಾತನ್ನ ವೃಷಭ ರಾಶಿಯವರು ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ.
- ನೀವೇನಾದರೂ ಆಲಸ್ಯ ಬಿಟ್ಟು, ನಿಮ್ಮ ಯಶಸ್ಸಿಗೆ ಬೇಕಾದ ರೀತಿ ಕೆಲಸ ಮಾಡಿದರೆ, ನೀವು ಕನಸ್ಸು ಮನಸ್ಸಿನಲ್ಲೂ ಅಂದುಕೊಳ್ಳದಷ್ಟು ಸಫಲತೆಯನ್ನ ನೀವು ಪಡೆದುಕೊಳ್ಳುತ್ತೀರಿ.
- ಹಸಿರು, ಕಪ್ಪು, ಬಿಳಿ, ನೀಲಿ ಬಣ್ಣ ನಿಮ್ಮ ಲಕ್ಕಿ ಬಣ್ಣವಾಗಿದೆ. ಬುಧವಾರ, ಶುಕ್ರವಾರ ಮತ್ತು ಶನಿವಾರ ಶುಭದಿನವಾದರೆ, 2,3,6,7 ಲಕ್ಕಿ ನಂಬರ್ಗಳಾಗಿದೆ. ಬ್ಯಾಕಿಂಗ್, ವಾಣಿಜ್ಯ, ಬಟ್ಟೆ ಉದ್ಯಮದಲ್ಲಿ ವೃಷಭ ರಾಶಿಯವರು ಯಶಸ್ಸು ಕಾಣಬಲ್ಲರು.
Discussion about this post