ವಿಶ್ವದೆಲ್ಲೆಡೆ ಈಗ ಹೊಸ ರೂಪಾಂತರಿ ವೈರಸ್ ಓಮಿಕ್ರಾನ್ ಸದ್ದು ಮಾಡುತ್ತಿದ್ದು, ಸಾಕಷ್ಟು ಜನರಿಗೆ ವೈರಸ್ ಸೋಂಕು ತಗಲುವ ಆತಂಕಕ್ಕಿಂತ ಲಾಕ್ ಡೌನ್ ಭಯವೇ ಹೆಚ್ಚು ಕಾಡುತ್ತಿದೆ. ಬೂಸ್ಟರ್ ಡೋಸ್ ಬಗ್ಗೆ ಸಾಮಾಜಿಕ ಜಾಲತಾಣ ಕೂ ನಲ್ಲಿ ಸಾಕಷ್ಟು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆತ್ಮೀಯ ಪ್ರಧಾನಿ ಸಾರ್, ನಾನು ನಿಮ್ಮ ದೊಡ್ಡ ಅಭಿಮಾನಿ ಆದರೆ, ಈ ಹೊಸ ವೈರಸ್ನಿಂದಾಗಿ ಇನ್ನು ಮುಂದೆ ಯಾವುದೇ ಲಾಕ್ಡೌನ್ ಅನ್ನು ಜಾರಿಗೊಳಿಸದಂತೆ ನಾನು ವಿನಂತಿಸುತ್ತೇನೆ. ನಾವು ಈಗ ಹೆಚ್ಚು ಬಲಿಷ್ಠರಾಗಿದ್ದೇವೆ. ನಾವು ವೈರಸ್ನೊಂದಿಗೆ ಎರಡು ಬಾರಿ ಹೋರಾಡಿದ್ದೇವೆ ಮತ್ತು ಎರಡೂ ಬಾರಿಯೂ ವಿಜಯಶಾಲಿಯಾಗಿದ್ದೇವೆ. ಈ ಬಾರಿಯೂ ಅದನ್ನು ಸೋಲಿಸುತ್ತೇವೆ ಎಂದು ಕುಂದನ್ ಭಗವತಿ ಎನ್ನುವವರು ಕೂ ಮಾಡಿದ್ದಾರೆ.
ಮತ್ತೆ ಕಟ್ಟು ನಿಟ್ಟಿನ ಕ್ರಮ.. ಮತ್ತೆ ಅದೇ ಬಂಧನದ ಬದುಕು. ಇನ್ನೆಷ್ಟು ವರ್ಷ ಇದೇ ರೀತಿ ನಡೆಯುವುದೋ ದೇವರೇ ಬಲ್ಲ. ಮಾನವ ಮಾಡುವ ತಪ್ಪಿಗೆ ಇಡೀ ಜನಾಂಗವೇ ನರಳಬೇಕಾದ ಪರಿಸ್ಥಿತಿ ಎಂದು ಮಹೇಶ್ ಕುಮಾರ್ ಅವರು ಕೂ ಮಾಡಿದ್ದಾರೆ.
ಬೂಸ್ಟರ್ ಅಗತ್ಯವಿದ್ದರೆ ಮಾತ್ರ ಅದನ್ನು ನೀಡಬೇಕು, ಭಾರತೀಯರು ಯುರೋಪಿಯನ್ ಗಿಂತ ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿದ್ದಾರೆ ಎಂದು ವರದಿಗಳು ಹೇಳುತ್ತವೆ ಎಂದಿದ್ದಾರೆ ಸತ್ರಾಜಿತ್ ಸೇನ್ ಗುಪ್ತಾ .
Discussion about this post