ಚಿಕ್ಕಮಗಳೂರು: ದಿ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಪ್ರವಾಸೋಧ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟಮಟ್ಟದ ಟಿಎಸ್ಡಿ ರ್ಯಾಲಿಗೆ ಕೈಮರದ ಸಿರಿ ನೇಚರ್ ರೂಸ್ಟ್ ನಲ್ಲಿ ಶನಿವಾರ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕೋವಿಡ್ ಮತ್ತಿತರ ಕಾರಣಗಳಿಂದ ಕ್ರೀಡಾ ಚಟುವಟಿಕೆಗಳ ಆಯೋಜನೆ ಮಾಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವೈವಿದ್ಯಮಯ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿ ಎಂದು ಅಭಿಪ್ರಾಯಿಸಿದರು ಜತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲರಿಗೂ ಶುಭ ಹಾರೈಸಿ ಸುರಕ್ಷಿತವಾಗಿ ತೆರಳುವಂತೆ ಆಶಿಸಿದರು
ಈ ರ್ಯಾಲಿ ನ್ಯಾವಿಗೇಶನ್ ಮತ್ತು ಲೆಕ್ಕಚಾರಿಕವಾಗಿದ್ದು ಟೈಪ್ ಸ್ಪೀಡ್ ಡಿಸ್ಟೆನ್ಸ್ ಫಾರ್ಮೆಟ್ನಲ್ಲಿ ನಡೆಯಲಿದೆ. ಲೆಗ್ ೧ ರಂದು ೧೮೦ ಕಿ. ಮೀ. ಮತ್ತು ಲೆಗ್ ೨ ೬೦ ಕಿಮೀ. ಸೇರಿದಂತೆ ಒಟ್ಟು ೨೪೦ ಕಿಲೋಮೀಟರ್ ರ್ಯಾಲಿ ಇದಾಗಿದ್ದು ಸಂಜೆ ೭.೩೦ ಕ್ಕೆ ಮೂಡಿಗೆರೆಯ ಡಿ ಕಾಫಿ ಕೋರ್ಟ್ ತಲುಪಿ ಭೋಜನ ವಿರಾಮದ ಬಳಿಕ ೮:೩೦ ಕ್ಕೆ ಪುನಃ ರ್ಯಾಲಿ ಪ್ರಾರಂಭವಾಗಿ ರಾತ್ರಿ ೧೦.೩೦ ಕ್ಕೆ ಚಿಕ್ಕಮಗಳೂರು ತಲುಪಲಿದೆ. ರ್ಯಾಲಿಯಲ್ಲಿ ಗೌಪ್ಯ ಚೆಕ್ ಪಾಯಿಂಟ್ಗಳನ್ನು ಅಳವಡಿಸಿದೆ. ಜತೆಗೆ ಇದರಲ್ಲಿ ಪ್ರೊ ಎಕ್ಸ್ಪರ್ಟ್ ವಿಭಾಗ, ಪ್ರೋ ಸ್ಟಾಕ್ ವಿಭಾಗ, ಕಪಲ್ ವಿಭಾಗ, ಕಾರ್ಪೊರೇಟ್ ವಿಭಾಗ, ನಾವೀಸ್ ವಿಭಾಗ, ಮಹಿಳಾ ವಿಭಾಗ ಸೇರಿದಂತೆ ಬೇರೆ ಬೇರೆ ವಿಭಾಗಗಳನ್ನು ಮಾಡಲಾಗಿದೆ. ದಿ ರ್ಯಾಲಿ ಆಫ್ ಚಿಕ್ಕಮಗಳೂರಿನಲ್ಲಿ ೪೦ ಸ್ಪರ್ಧಿಗಳು ಭಾಗವಹಿಸಿದ್ದಾರೆ ಎಂದು ಚಿಕ್ಕಮಗಳೂರು ದಿ ಮೋಟರ್ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಜಯಂತ್ ಪೈ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್, ಸಿಇಒ ಜಿ.ಪ್ರಭು, ಸಿಡಿಎ ಅಧ್ಯಕ್ಷ ಆನಂದ್, ಚಿಕ್ಕಮಗಳೂರು ದಿ ಮೋಟರ್ ಸ್ಪೋರ್ಟ್ಸ್ ಕ್ಲಬ್ನ ಉಪಾಧ್ಯಕ್ಷ ಫಾರುಕ್ ಅಹಮದ್, ಜಂಟಿ ಕಾರ್ಯದರ್ಶಿ ಅಭಿಜಿತ್ ಪೈ, ಕಾರ್ಯಕ್ರಮ ಆಯೋಜಕ ದಿಲೀಪ್, ಸದಸ್ಯ ದಿವಿನ್ ಮತ್ತಿತರರು ಇದ್ದರು.
Discussion about this post