Spiritual: ಪ್ರೀತಿ ಪಾತ್ರರಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಹೀಗೆ ಹಲವರಿಗೆ ಕೆಲವರು ಊಟಕ್ಕೆ ಕರೆದಿರುತ್ತಾರೆ. ಪ್ರೀತಿಯಿಂದ ಕರೆದಿದ್ದಾರೆಂದು ಅವರೂ ಊಟಕ್ಕೆ ಬರುತ್ತಾರೆ. ಆದ್ರೆ ಆಮೇಲೆ ಅವರಿಗೆ ಯಾಕಾದ್ರೂ ನಾವು ಅವರ ಮನೆಗೆ ಊಟಕ್ಕೆ ಹೋದ್ನೋ ಅಂತಾ ಅನ್ನಿಸಿರುತ್ತದೆ. ಹಾಗಾಗಿ ನಿಮಗೆ ಹೀಗನ್ನಿಸಬಾರದು ಅಂತಾದ್ರೆ ನೀವು 6 ರೀತಿಯ ಜನರ ಮನೆಗೆ ಎಂದಿಗೂ ಊಟಕ್ಕೆ ಹೋಗಬಾರದು. ಯಾರು ಆ 6 ರೀತಿಯ ಜನ ಅಂತಾ ತಿಳಿಯೋಣ ಬನ್ನಿ..
ಮೊದಲನೇಯವರು ಕೊಲೆಗಡುಕರು. ಯಾರಾದರೂ ಕೊಲೆ ಮಾಡಿದ್ದಾರೆಂಬ ನಿಮಗೆ ಗೊತ್ತಿದ್ದೂ ನೀವು ಅವರ ಮನೆಗೆ ಊಟಕ್ಕೆ ಹೋದರೆ, ಅವರ ಪಾಪದಲ್ಲಿ ನಿಮಗೂ ಪಾಲಾಗುತ್ತದೆ. ನೀವು ಡರೆಕ್ಟ್ ಆಗಿ ಕೊಲೆ ಮಾಡದಿದ್ದರೂ, ಕೊಲೆಯ ಪಾಪ ನಿಮಗೆ ಸುತ್ತಿಕೊಳ್ಳುತ್ತದೆ.
ಇದನ್ನು ಓದಿ: Dhaka News: ಮರಣದಂಡನೆಗೆ ಗುರಿಯಾಗಿದ್ದ ಉಗ್ರನಿಗೆ ಬಾಂಗ್ಲಾ ಸುಪ್ರೀಂನಿಂದ ಖುಲಾಸೆ
ಎರಡನೇಯವರು ವೇಶ್ಯೆ. ನಿಮಗೆ ಮನೆಗೆ ಊಟಕ್ಕೆ ಕರೆದ ಮಹಿಳೆ ವೇಶ್ಯೆ ಎಂದು ಗೊತ್ತಿದ್ದರೂ, ನೀವು ಆಕೆಯ ಮನೆಗೆ ಊಟಕ್ಕೆ ಹೋದ್ರೆ, ಆಕೆ ಮಾಡಿದ ಪಾಪದಲ್ಲಿ ನಿಮಗೂ ಪಾಲಿರುತ್ತದೆ. ಎಷ್ಟೋ ಜನ ತಮ್ಮ ಪತ್ನಿಯರಿಗೆ ಮೋಸ ಮಾಡಿ, ವೇಶ್ಯೆಯ ಬಳಿ ಬಂದಿರುತ್ತಾರೆ. ಅವರಿಗೆ ಸಹಾಯ ಮಾಡುವ ವೇಶ್ಯೆ, ಅವರ ಪಾಪದಲ್ಲಿ ಭಾಗಿಯಾಗುತ್ತಾಳೆ. ಆ ರೀತಿ ಪಾಪದ ಹಣ ಸಂಪಾದಿಸಿ, ಮಾಡಿದ ಅಡುಗೆಯನ್ನ ನೀವು ತಿಂದರೆ, ಆ ಪಾಪದಲ್ಲಿ ನೀವೂ ಭಾಗಿಯಾದಂತೆ.
ಇದನ್ನು ಓದಿ: Recipe: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬೆಳ್ಳುಳ್ಳಿ ರಸಮ್
ಮೂರನೇಯವರು ಒತ್ತಡದಲ್ಲಿರುವವರು. ಎಷ್ಟೇ ಶ್ರೀಮಂತರಿದ್ದರೂ, ಟೆನ್ಶನ್ ಅನ್ನೋದು ಯಾರಿಗೂ ಬಿಡದ ಭೂತ. ಹಾಗಾಗಿ ನೀವು ಯಾರ ಮನೆಗೆ ಊಟಕ್ಕೆ ಹೋಗುತ್ತೀರೋ, ಅವರಿಗೆ ಟೆನ್ಶನ್ ಇದ್ದಲ್ಲಿ, ಅವರು ಆ ಟೆನ್ಶನ್ನನ್ನು ಎಲ್ಲರೆದುರು ತೋರಿಸಿಕೊಳ್ಳುತ್ತಿದ್ದಲ್ಲಿ. ಅಂಥವರ ಮನೆಗೆ ಹೋಗುವುದನ್ನು ತಪ್ಪಿಸಿ. ಯಾಕಂದ್ರೆ ಅಂಥ ಮನೆಯಲ್ಲಿ ಊಟ ಮಾಡಿದರೂ ಮಾಡಿದ ಹಾಗೆ ಆಗೋದಿಲ್ಲಾ.
ಇದನ್ನು ಓದಿ: Life Lessons: ಜೀವನದಲ್ಲಿ ಯಶಸ್ವಿಯಾಗ ಬಯಸಿದರೆ ಈ 5 ಸೂತ್ರಗಳನ್ನು ಪಾಲಿಸಿ
ನಾಲ್ಕನೇಯವರು ಮೋಸಗಾರರು. ಒಬ್ಬರಿಗೆ ದುಡ್ಡಿನ ವಿಷಯದಲ್ಲಿ, ಕೆಲಸದ ವಿಷಯದಲ್ಲಿ ಮಾಡುವ ಮೋಸವೂ ಮೋಸವೆ. ಮೋಸದಲ್ಲಿ ದೊಡ್ಡ ಮೋಸ ಸಣ್ಣ ಮೋಸವೆಂದಿರುವುದಿಲ್ಲ. ಮೋಸ ಮೋಸವೇ. ಕೆಲ ಕೆಲಸ ಮಾಡಿ ಶಾರ್ಟ್ ಕಟ್ನಲ್ಲಿ ದುಡ್ಡು ಮಾಡುವವರು, ಹೆಚ್ಚಾಗಿ ಲಂಚ ಪಡೆದು, ಅಥವಾ ಮೋಸ ಮಾಡಿಯೇ ಹಣ ಮಾಡಿರುತ್ತಾರೆ. ಅಂಥವರ ಮನೆಯಲ್ಲಿ ಉಂಡರೆ, ಆ ಮೋಸದಲ್ಲಿ ನೀವೂ ಪಾಲು ಪಡೆದುಕೊಳ್ಳುತ್ತೀರಿ.
ಇದನ್ನು ಓದಿ: Life Lesson: ಅಪ್ಪ ಅಮ್ಮನಿಗಿಂತ ಮಿಗಿಲಾದ ದೇವರಿಲ್ಲ ಅಂತಾ ಹೇಳೋದ್ಯಾಕೆ ಗೊತ್ತಾ..?
ಐದನೇಯವರು ಪರಿಚಯವಿಲ್ಲದವರು. ನಿಮಗೆ ಪರಿಚಯವಿದ್ದವರ ಮನೆಯವರು ನಿಮಗೆ ಊಟಕ್ಕೆ ಕರೆದರಷ್ಟೇ ಊಟಕ್ಕೆ ಹೋಗಿ. ಅಪರಿಚಿತರ ಮನೆಗೆ ಊಟಕ್ಕೆ ಹೋಗುವುದು ಉತ್ತಮವಲ್ಲ. ಅವರು ಕೆಟ್ಟವರೂ ಆಗಿರಬಹುದು, ಒಳ್ಳೆಯವರೂ ಆಗಿರಬಹುದು. ಆದರೆ ಪರಿಚಯವಿಲ್ಲದವರ ಮನೆಯಲ್ಲಿ ಪುಕ್ಕಟೆ ಊಟ ಮಾಡುವುದು ಒಳ್ಳೆಯದಲ್ಲ.
ಇದನ್ನು ಓದಿ: Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ
ಆರನೇಯವರು ನಿಮಗಿಷ್ಟವಾಗದವರು. ನೀವು ಅಪ್ಪಿತಪ್ಪಿ ನಿಮಗಿಷ್ಟವಾಗದವರ ಮನೆಯಲ್ಲಿ, ಯಾರದ್ದೋ ಒತ್ತಾಯಕ್ಕೆ ಊಟ ಮಾಡಿದರೆ, ಮುಂದೊಂದು ದಿನ ಹೀಯಾಳಿಕೆಯ ಮಾತನ್ನು ನೀವು ಕೇಳಬೇಕಾಗುತ್ತದೆ. ನೀವು ಅವರ ಮನೆಯಲ್ಲಿ ಊಟ ಮಾಡಿದ್ದನ್ನೇ ಅವರು ಅಸ್ತ್ರವಾಗಿ ಬಳಸಿ, ನಿಮಗೆ ಅವಮಾನ ಮಾಡಬಹುದು. ಹಾಗಾಗಿ ಎಂದಿಗೂ ನಿಮಗಿಷ್ಟವಾಗದವರ ಮನೆಯಲ್ಲಿ ನೀರನ್ನು ಸಹ ಕುಡಿಯಬೇಡಿ.
ಇದನ್ನು ಓದಿ: Life lesson: ಇಂದಿನ ಯುವ ಪೀಳಿಗೆ ಈ 5 ವಿಷಯಗಳಿಂದ ದೂರವಿರಬೇಕು
Discussion about this post