Spiritual News: ವಿಶ್ವದಲ್ಲೇ ಯಾರೂ ಮೀರಿಸಲಾಗದ ಪಂಡಿತರೆಂದೆನಿಸಿಕೊಂಡ ಚಾಣಕ್ಯರು, ಮೌರ್ಯ ಸಾಮ್ರಾಜ್ಯದ ಅಡಿಪಾಯದಂತಿದ್ದವರು. ಸಕಲ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದ ಚಾಣಕ್ಯರು, ತಾವೇ ಒಂದು ಸಾಮ್ರಾಜ್ಯವನ್ನು ಕಟ್ಟಿಕೊಂಡು, ರಾಜನಾಗಬಹುದಿತ್ತು. ಆದ್ರೆ ಅಧಿಕಾರಕ್ಕಾಗಿ ಆಸೆ ಮಾಡದ ಚಾಣಕ್ಯರು, ಚಂದ್ರಗುಪ್ತ ಮೌರ್ಯನನ್ನು ಚಕ್ರವರ್ತಿಯನ್ನಾಗಿ ಮಾಡಿ, ಅಲ್ಲಿನ ಪಂಡಿತರಾಗಿಯೇ ಉಳಿದರು. ಹೀಗೆ ಅತೀ ಆಸೆ ಮಾಡದೇ, ತಮ್ಮ ಚಾಣಾಕ್ಷ ತನವನ್ನು ಕೇವಲ ಭಾರತದ ಉದ್ಧಾರಕ್ಕಾಗಿ ಮೀಸಲಿಟ್ಟಿದ್ದ ಚಾಣಕ್ಯರ ಬಾಲ್ಯದಲ್ಲಿ ನಡೆದ ಘಟನೆಯನ್ನು ನಾವಿಂದು ವಿವರಿಸಲಿದ್ದೇವೆ.
ಚಾಣಕ್ಯರ ಮನೆಗೆ ಬಂದಿದ್ದ ಜ್ಯೋತಿಷಿ, ಚಾಣಕ್ಯರ ಬಗ್ಗೆ ಒಂದು ಭವಿಷ್ಯ ನುಡಿದಿದ್ದರಂತೆ. ಆದ್ರೆ ಆ ಭವಿಷ್ಯದಿಂದ ತನ್ನ ತಾಯಿಗೆ ತೊಂದರೆಯಾಗಬಹುದೆಂದು ಕೌಟಿಲ್ಯರು ತಮ್ಮ ಹಲ್ಲನ್ನೇ ಮುರಿದುಕೊಂಡು, ತಮ್ಮ ಭವಿಷ್ಯವನ್ನೇ ಬದಲಾಯಿಸಿಕೊಂಡರು. ಹಾಗಾದ್ರೆ ಜ್ಯೋತಿಷಿ ನುಡಿದ ಭವಿಷ್ಯವೇನು..? ಅದನ್ನು ಕೇಳಿ ಚಾಣಕ್ಯರ ತಾಯಿ ಕಣ್ಣೀರು ಹಾಕಿದ್ದೇಕೆ..? ಕೌಟಿಲ್ಯ ತಮ್ಮ ಹಲ್ಲು ಮುರಿದುಕೊಳ್ಳುವಂಥದ್ದೇನಾಯಿತು..? ಇತ್ಯಾದಿ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.
ಚಣಕನ ಮಗನಾಗಿದ್ದರಿಂದ ಇವರಿಗೆ ಚಾಣಕ್ಯ(Chanakya) ಎಂದು ಹೆಸರು ಬಂದಿತ್ತು. ಇನ್ನು ಕುಟೀಲ ನೀತಿ ಗೊತ್ತಿದ್ದ ಕಾರಣ ಕೌಟಿಲ್ಯ(koutilya) ಎಂದು ಕರೆಯಲಾಗುತ್ತಿತ್ತು. ಇಂಥ ಚಾಣಕ್ಯ ಅಮ್ಮನ ಮುದ್ದಿನ ಮಗನಾಗಿದ್ದ. ಹಾಗಾಗಿ ಚಾಣಕ್ಯನ ಭವಿಷ್ಯದ ಬಗ್ಗೆ ತಾಯಿಗೆ ತುಂಬಾ ಕುತೂಹಲ, ಅಂತೆಯೇ ಹೆದರಿಕೆಯೂ ಇತ್ತು. ಹಾಗಾಗಿ ಅವನ ಜಾತಕವನ್ನು ಯಾವುದಾದರೂ ಜ್ಯೋತಿಷಿಗಳಿಗೆ ತೋರಿಸಿ, ಅವನ ಭವಿಷಯದ ಬಗ್ಗೆ ಕೇಳಬೇಕು ಎಂದು ಆಕೆ ಕಾಯುತ್ತಿದ್ದಳು. ಬಾಲಕ ಚಾಣಕ್ಯ ಒಮ್ಮೆ ತಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ, ಅವರ ಮನೆಗೆ ಓರ್ವ ಜ್ಯೋತಿಷಿಗಳು ಬಂದರಂತೆ.
ಮೊದಲೇ ಮಗನ ಜಾತಕವನ್ನು ತೋರಿಸಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಚಾಣಕ್ಯರ ತಾಯಿ, ಇದೇ ಉತ್ತಮ ಸಮಯವೆಂದು ತಿಳಿದು ಚಾಣಕ್ಯರ ಜಾತಕ ತಂದು ಜ್ಯೋತಿಷಿಗಳಿಗೆ ತೋರಿಸಿದರು. ಚಾಣಕ್ಯರ ಜಾತಕ ನೋಡಿದ ಜ್ಯೋತಿಷಿಗಳು, ಅವನ ಬಗ್ಗೆ ಒಂದು ಮಾತು ಹೇಳಿದರು. ಅದನ್ನು ಕೇಳಿ, ಚಾಣಕ್ಯನ ತಾಯಿ ಅಳಲು ಶುರು ಮಾಡಿದರು.
ಯಾಕಂದ್ರೆ ಜ್ಯೋತಿಷಿಗಳು ಚಾಣಕ್ಯರ ಜಾತಕ ನೋಡಿ, ಈತನ ಜಾತಕದಲ್ಲಿ ರಾಜಯೋಗವಿದೆ. ಈತ ಭವಿಷ್ಯದಲ್ಲಿ ಪ್ರಧಾನ ಮಂತ್ರಿಯಾಗುತ್ತಾನೆ. ಬೇಕಾದರೆ ಅವನ ಹಲ್ಲಿನ ಮೇಲೆ ನಾಗನ ಚಿಹ್ನೆ ಇದೆ ನೋಡು ಅಂತಾ ಚಾಣಕ್ಯರ ತಾಯಿಗೆ ಹೇಳಿ ಹೋದರಂತೆ. ಈ ಮಾತನ್ನು ಕೇಳಿದ ಚಾಣಕ್ಯರ ಅಮ್ಮ, ಚಾಣಕ್ಯರ ಹಲ್ಲು ಕಂಡರಂತೆ. ಅವರ ಹಲ್ಲಿನ ಮೇಲೆ ನಾಗನ ಚಿಹ್ನೆ ಇದ್ದದ್ದನ್ನ ಕಂಡು ಚಾಣಕ್ಯರ ತಾಯಿ ಅಳಲು ಶುರು ಮಾಡಿದರು.
ಆಗ ಚಾಣಕ್ಯರು ಅಮ್ಮನ ಕಣ್ಣೀರಿಗೆ ಕಾರಣವೇನು ಅಂತಾ ಕೇಳಿದಾಗ, ನಿನ್ನ ಹಲ್ಲಿನ ಮೇಲೆ ನಾಗನ ಚಿಹ್ನೆ ಇದೆ. ಇದರ ಅರ್ಥ ನೀನು ಭವಿಷ್ಯದಲ್ಲಿ ಪ್ರಧಾನ ಮಂತ್ರಿಯಾಗುತ್ತಿ ಎಂದು ಜ್ಯೋತಿಷಿಗಳು ಹೇಳಿದರು. ಹಾಗೇನಾದರೂ ಆದರೆ, ಮುಂದೆ ನೀನು ನನ್ನನ್ನು ಮರೆತು ಬಿಡುತ್ತಿ. ಆಗ ನನಗ್ಯಾರು ಗತಿ ಎಂದು ಮತ್ತೆ ಅಳಲು ಶುರು ಮಾಡಿದರಂತೆ. ಇದನ್ನು ಕೇಳಿದ ಬಾಲಕ ಚಾಣಕ್ಯ, ನಾಗಚಿಹ್ನೆ ಇರುವ ಹಲ್ಲನ್ನು ಕಲ್ಲಿನಿಂದ ಮುರಿದುಕೊಂಡು, ಅಮ್ಮ ಈಗ ನೋಡು ನಾಗಚಿಹ್ನೆ ಇರುವ ಹಲ್ಲನ್ನು ನಾನು ಮುರಿದುಕೊಂಡಿದ್ದೇನೆ. ನಿನ್ನ ಪ್ರೀತಿ ವಾತ್ಸಲ್ಯದ ಮುಂದೆ ನನಗ್ಯಾವ ಅಧಿಕಾರವೂ ಬೇಡ, ದುಡ್ಡೂ ಬೇಡ ಅಂತಾ ಹೇಳಿದರಂತೆ. ಮುಂದೆ ಚಂದ್ರಗುಪ್ತನ ಆಸ್ಥಾನದಲ್ಲಿ ಉತ್ತಮ ಹುದ್ದೆ ಇದ್ದರೂ ಕೂಡ, ಚಾಣಕ್ಯರು ಅದನ್ನ ದುರುಪಯೋಗಪಡಿಸಿಕೊಳ್ಳದೇ, ಮೌರ್ಯವಂಶದ ಬೆನ್ನೆಲುಬಾಗಿ ನಿಂತಿದ್ದೇ ಇದಕ್ಕೆ ಸಾಕ್ಷಿ.
Spiritual: ಈ ದೇವಸ್ಥಾನಕ್ಕೆ ಭೇಟಿ ಕೊಟ್ಟವರಿಗೆ ಎಂದೂ ಸೋಲಿಲ್ಲ.. ಸೆಲೆಬ್ರಿಟಿ, ರಾಜಕಾರಣಿಗಳ ನೆಚ್ಚಿನ ದೇವರೀತ..
Tirupati Tirumala: ತಿರುಪತಿ ತಿರುಮಲ ಲಡ್ಡು ಪ್ರಸಾದದ ಇಂಟ್ರೆಸ್ಟಿಂಗ್ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?
ಸೊಕ್ಕಿನ ಮಾತನ್ನಾಡಿದ್ದ ವಿದೇಶಿ ಉದ್ಯಮಿಗೆ ರತನ್ ಕೊಟ್ಟ ತಿರುಗೇಟು ಎಂಥದ್ದು..? ಟಾಟಾ ಜೀವನದ ರೋಚಕ ಕಥೆ
Discussion about this post