ದುಬೈ: ಭಾನುವಾರ ನಡೆದ ರೋಚಕ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಕ್ವಾಲಿಫೈಯರ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ನಾಯಕ ಮಹೇಂದ್ರಸಿಂಗ್ ಧೋನಿಯವರ ಅದ್ಭುತ ಆಟದ ಮೂಲಕ ಚೆನ್ನೈ ಸೂಪರ್ಕಿಂಗ್ಸ್ ತಂಡವು ಗೆಲುವು ಸಾಧಿಸಿ ಫೈನಲ್ ತಲುಪಿತು.
ಧೋನಿಯ ಈ ರೋಮಾಂಚಕ ಆಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಹಾಗೂ ಸಹಆಟಗಾರರ ಪ್ರಶಂಸೆಗಳ ಮಹಾಪೂರವೇ ಹರಿದು ಬಂದವು. ಭಾರತ ಹಾಗೂ ಆರ್ಸಿಬಿ ತಂಡಗಳ ನಾಯಕ ವಿರಾಟ್ ಕೊಹ್ಲಿ “ರಾಜನ ಪುನಾರಗಮನ, ಚುಟುಕಪಂದ್ಯಗಳ ಅತ್ಯುತ್ತಮ ಫಿನಿಷರ್, ನಾನು ಮತ್ತೊಮ್ಮೆ ಕುಳಿತಲ್ಲಿಂದ ಜಿಗಿಯುವಂತಾಯಿತು” ಎಂದು ಟ್ವೀಟ್ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಕಡೆಯ ಓವರ್ನ 4ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಫೈನಲ್ ತಲುಪಿಸಿದ ಧೋನಿ ಕೇವಲ 6 ಎಸೆತಗಳಲ್ಲಿ 3 ಆಕರ್ಷಕ ಬೌಂಡರಿಗಳು ಮತ್ತು 1 ಮನಮೋಹಕ ಸಿಕ್ಸರ್ ಬಾರಿಸಿ ಒಟ್ಟು 18 ರನ್ ಗಳಿಸಿ ಔಟಾಗದೆ ಉಳಿದರು. ತಂಡದ ಗೆಲುವಿನಲ್ಲಿ ಋತುರಾಜ್ ಗಾಯಕ್ವಾಡ್ 70 ರನ್ ಹಾಗೂ ರಾಬಿನ್ ಉತ್ತಪ್ಪ 63ರನ್ ಗಳಿಸಿ ಮುಖ್ಯ ಪಾತ್ರ ವಹಿಸಿದರು. ಉತ್ತಮ ಹೋರಾಟ ಕಂಡ ಪಂದ್ಯದಲ್ಲಿ ಚೆನ್ನೈ 6 ವಿಕೆಟ್ಗಳ ನಷ್ಟಕ್ಕೆ 173 ರನ್ ಗಳಿಸಿ ನಾಲ್ಕು ವಿಕೆಟ್ ಅಂತರದ ಜಯ ಸಾಧಿಸಿತು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡ 5 ವಿಕೆಟ್ಗಳ ನಷ್ಟಕ್ಕೆ 172 ರನ್ಗಳ ಸವಾಲಿನ ಮೊತ್ತ ಗಳಿಸಿತು. ದೆಹಲಿ ಉತ್ತಮ ಮೊತ್ತ ಗಳಿಸಲು ಪೃಥ್ವಿ ಶಾ ಗಳಿಸಿದ 60 ರನ್, ರಿಷಭ್ ಪಂತ್ ಗಳಿಸಿದ ಅರ್ಧಶತಕ, ಹಾಗೂ ಶಿಮ್ರೊನ್ ಹೆಟ್ಮೆಯರ್ ಗಳಿಸಿದ 37 ರನ್ಗಳು ನೆರವಾದವು. ಈ ಸೋಲಿನ ನಡುವೆಯೂ ಫೈನಲ್ ತಲುಪಲು ದೆಹಲಿ ತಂಡಕ್ಕೆ ಮತ್ತೊಂದು ಅವಕಾಶವಿದ್ದು ಬುಧವಾರ ನಡೆಯಲಿರುವ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವನ್ನು ಕಂಡರೆ ಮಾತ್ರ ಅದು ಸಾಧ್ಯವಾಗಲಿದೆ.
Anddddd the king is back ❤️the greatest finisher ever in the game. Made me jump Outta my seat once again tonight.@msdhoni
— Virat Kohli (@imVkohli) October 10, 2021
Dhoni takes Chennai Super Kings to the Finals of IPL 2021
ಇದನ್ನೂ ಓದಿ: ಐಪಿಎಲ್ ಗಾಗಿ ಮಾತ್ರ ಇಂಗ್ಲೆಂಡ್-ಇಂಡಿಯ ನಡುವಿನ ಕೊನೆ ಟೆಸ್ಟ್ ರದ್ದಾಗಿದೆ
ಇದನ್ನೂ ಓದಿ: ಭಾರತೀಯ ಮಹಿಳಾ ಕ್ರಿಕೆಟ್ ಬಾನಂಗಳದಲ್ಲಿ ಹೊಳೆಯುವ ತಾರೆಯಾಗಿ ಉದಯಿಸಿದ ಸ್ಮೃತಿ ಮಂಧಾನ
Discussion about this post