ಬೆಂಗಳೂರು: ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ಸಮಸ್ಯೆ ಎದುರಿಸುತ್ತಿದ್ದು ಇತ್ತೀಚೆಗೆ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಇದು ಅವರ ನಾಯಕತ್ವಕ್ಕೂ ಸವಾಲೆಸೆದಿದ್ದು ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಳ್ಳಲೂ ಸ್ವಲ್ಪ ಮಟ್ಟಿಗೆ ಕಾರಣವಾಗಿದೆ. ಇಂತಹ ಸಮಯದಲ್ಲಿ ವಿರಾಟ್ರನ್ನು ಮತ್ತೆ ಯಶಸ್ಸಿನ ಹಾದಿಗೆ ತರಲು ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಸಮರ್ಥರಿದ್ದಾರೆ ಎಂದು ಭಾರತ ಕ್ರಿಕೆಟ್ ರಾಷ್ಟ್ರೀಯ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಆಯ್ಕೆದಾರ ಸಬಾ ಕರೀಮ್ ತಿಳಿಸಿದ್ದಾರೆ.
ಭಾರತೀಯ ಟೆಸ್ಟ್ ತಂಡದ ನಾಯಕ 33ರ ಹರೆಯದ ವಿರಾಟ್ ವಿಶ್ವದ ಅಗ್ರಗಣ್ಯ ಬ್ಯಾಟ್ಸ್ಮನ್ಗಳಲ್ಲಿ ಪ್ರಮುಖರಾದರೂ ಇತ್ತೀಚೆಗೆ ಸತತ ವೈಫಲ್ಯ ಕಂಡಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅವರು ಮೈದಾನದ ಆಚೆಗಿಂತ ಮೈದಾನದೊಳಗೆ ದೊಡ್ಡ ಮಟ್ಟದ ಸವಾಲನ್ನು ಎದುರಿಸಬೇಕಾಗಿದೆ ಎಂದ ಸಬಾ ಕರೀಮ್ ಅವರ ಆಟ ಉತ್ತಮಗೊಳ್ಳುವಲ್ಲಿ ದ್ರಾವಿಡ್ ಪ್ರಧಾನಪಾತ್ರ ವಹಿಸಲು ಸಾಧ್ಯವಿದೆ ಎಂದಿದ್ದಾರೆ.
ವರದಿಗಾರರೊಂದಿಗೆ ಮಾತನಾಡುತ್ತಿದ್ದ ಸಬಾ ಕರೀಮ್, ಮೈದಾನದೊಳಗಿನ ಸವಾಲು ವಿರಾಟ್ಗೆ ಹೆಚ್ಚು ಕಷ್ಟಕರವಾಗಲಿದ್ದು ಅದನ್ನು ಅವರೂ ಅರಿತಿದ್ದಾರೆ ಎಂದರು. ಕಳೆದ ಒಂದೆರಡು ವರ್ಷಗಳಲ್ಲಿ ಅವರ ಫಾರ್ಮ್ ಮಾತ್ರವಲ್ಲ ತಂಡದ ಪ್ರಮುಖ ಆಟಗಾರರ ಫಾರ್ಮ್ ಉತ್ತಮವಾಗಿಲ್ಲದಿರುವುದೂ ಮತ್ತು ಬ್ಯಾಟಿಂಗ್ನಲ್ಲಿ ದೃಢತೆಯ ಕೊರತೆ ಹಾಗೂ ಉತ್ತಮ ಜೊತೆಯಾಟಗಳ ಕೊರತೆಯ ಬಗ್ಗೆಯೂ ಅವರಿಗೆ ತಿಳಿದಿದೆ ಎಂದ ಸಬಾ ತಂಡದ ಮನೋಬಲವನ್ನು ಹೆಚ್ಚಿಸುವಲ್ಲಿ ರಾಹುಲ್ ದ್ರಾವಿಡ್ ಯಶಸ್ವಿಯಾಗಲಿದ್ದಾರೆಂದು ಆಶಿಸಿದ್ದಾರೆ.
ಪ್ರಸಕ್ತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ತಂಡದ ನಾಯಕತ್ವ ವಹಿಸಿರುವ ವಿರಾಟ್ಗೆ ಇದು ಅವರ ಕ್ರಿಕಟ್ ಜೀವನದ 3ನೇ ದಕ್ಷಿಣ ಆಫ್ರಿಕಾ ಪ್ರವಾಸವಾಗಿದ್ದು ಕಳೆದೆರಡು ಪ್ರವಾಸಗಳಲ್ಲಿ 55.80ರ ಸರಾಸರಿಯಲ್ಲಿ 2 ಶತಕ ಹಾಗೂ 2 ಅರ್ಧಶತಕಗಳನ್ನೊಳಗೊಂಡಿರುವ 558 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಂತಹ ಪ್ರಬಲ ತಂಡದೊಂದಿಗೆ ಸೆಣೆಸುವಾಗ ತಂಡಕ್ಕೆ ವಿರಾಟ್ರ ಕಾಣಿಕೆ ಹೇಗಿರಬಹುದೆಂಬ ಕಾತರ-ಕುತೂಹಲ್ ಈಗಾಗಲೇ ಅಭಿಮಾನಿಗಳಲ್ಲಿ ಮನೆಮಾಡಿದೆ.
Ex-Indian Selector Saba Karim says Rahul Dravid can play a vital role in improving Virat kohlis batting
ಇದನ್ನೂ ಓದಿ: Cricket: 2018-20ರ ಅವಧಿಯಲ್ಲಿ ಕ್ರಿಕೆಟ್ನಿಂದ ನಿವೃತ್ತಿ ಹೊಂದುವ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದೆ: ಅಶ್ವಿನ್
ಇದನ್ನೂ ಓದಿ: 2019ರ ಕ್ರಿಕೆಟ್ ವಿಶ್ವಕಪ್ ತಂಡದ ಆಯ್ಕೆ ಕುರಿತ ಶಾಸ್ತ್ರಿ ಹೇಳಿಕೆಗೆ ಸರನ್ದೀಪ್ ತೀಕ್ಷ್ಣ ಪ್ರತಿಕ್ರಿಯೆ
Discussion about this post