ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು (ಶುಕ್ರವಾರ) ಬೆಳಿಗ್ಗೆ ಆರಂಭವಾಗಬೇಕಿದ್ದ ನ್ಯೂಜಿಲೆಂಡ್ – ಭಾರತ ನಡುವಣ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯ ವಿಳಂಬವಾಗಿ ಆರಂಭವಾಗಿದೆ. ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ರಾತ್ರಿ ಮಳೆ ಸುರಿದ ಕಾರಣ ಬೆಳಿಗ್ಗೆ ಕ್ರೀಡಾಂಗಣದಲ್ಲಿ ತೇವಾಂಶ ಹೆಚ್ಚಿತ್ತು. ಹೀಗಾಗಿ ಪಂದ್ಯ ಆರಂಭಿಸುವುದು ಸಾಧ್ಯವಾಗಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.
ಇದನ್ನೂ ಓದಿ: IND vs NZ Test: 5 ವರ್ಷಗಳ ಬಳಿಕ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ ವಾಂಖೆಡೆ – ಇಲ್ಲಿದೆ ಕ್ರೀಡಾಂಗಣದ ಟೆಸ್ಟ್ ಇತಿಹಾಸ
ಭಾರತಕ್ಕೆ ಗಾಯಾಳುಗಳ ಚಿಂತೆ: ಭಾರತ ತಂಡಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ಮೊದಲನೇ ಟೆಸ್ಟ್ನಲ್ಲಿ ಉತ್ತಮ ಆಟವಾಡಿದ್ದ ಆಲ್ರೌಂಡರ್ ರವೀಂದ್ರ ಜಡೇಜ ಗಾಯದ ಕಾರಣ ಈ ಪಂದ್ಯಕ್ಕೆ ಲಭ್ಯರಿಲ್ಲ.
ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮಾ ಸಹ ಗಾಯಾಳು ಪಟ್ಟಿಗೆ ಸೇರಿದ್ದು, ಪಂದ್ಯಕ್ಕೆ ಲಭ್ಯರಿಲ್ಲ ಎಂದು ಬಿಸಿಸಿಐ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ ಕೂಡ ಗಾಯಗೊಂಡಿದ್ದು, ಈ ಪಂದ್ಯಕ್ಕೆ ಲಭ್ಯರಿಲ್ಲ.
ಇನ್ನಷ್ಟು ಸುದ್ದಿಗಳು…
IPL 2022: ಆರ್ಸಿಬಿ ತಂಡದ ಹಿತಾಸಕ್ತಿಗಾಗಿ ವೇತನ ಕಡಿತ ಮಾಡಿಕೊಂಡ ವಿರಾಟ್ ಕೊಹ್ಲಿ!
IPL 2022: ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಿತ್ತು ಎಂದ ರೋಹಿತ್ ಶರ್ಮಾ! ಯಾರು ಆ ಆಟಗಾರರು?
IPL 2022: ಕನ್ನಡಿಗ ರಾಹುಲ್ ಕೈಬಿಟ್ಟ ಪಂಜಾಬ್, ಪಾಂಡ್ಯಗಿಲ್ಲ ಮುಂಬೈ ಪರ ಆಡುವ ಅವಕಾಶ
IPL 2022: ಪಂಜಾಬ್ ಕಿಂಗ್ಸ್ನಿಂದ ರಾಹುಲ್ ಕೈಬಿಟ್ಟದ್ದಕ್ಕೆ ಅನಿಲ್ ಕುಂಬ್ಳೆ ಕೊಟ್ಟ ಕಾರಣವಿದು…
IPL 2022: ತಂಡಗಳು ಉಳಿಸಿಕೊಂಡ ಆಟಗಾರರು ಯಾರೆಲ್ಲ? ಇಲ್ಲಿದೆ ನೋಡಿ
NEWS – Injury updates – New Zealand’s Tour of India
Ishant Sharma, Ajinkya Rahane and Ravindra Jadeja ruled out of the 2nd Test.
More details here – https://t.co/ui9RXK1Vux #INDvNZ pic.twitter.com/qdWDPp0MIz
— BCCI (@BCCI) December 3, 2021
Discussion about this post