ಚೆನ್ನೈ: ಇತ್ತೀಚೆಗೆ ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತದ ವನಿತೆಯರು ಅದ್ಭುತ ಜಯಭೇರಿ ಬಾರಿಸಿ ಚಿನ್ನದ ಪದಕ ಗಳಿಸಿದ್ದಾರೆ. ಈ ಯಶಸ್ವಿ ಅಭಿಯಾನದ ನಂತರ ತಂಡದ ಸದಸ್ಯೆಯಾಗಿದ್ದ ತಮಿಳುನಾಡಿನ ಕರೂರು ಜಿಲ್ಲೆಯ ನಲ್ಲಮುತ್ತುಪಾಳ್ಯ ಗ್ರಾಮದ ನಿವಾಸಿ ಆನಂದಿ ತಮ್ಮ ಊರಿಗೆ ಮರಳಿ ಬಂದಾಗ ಅವರಿಗೆ ಗ್ರಾಮಸ್ಥರೆಲ್ಲಾ ಸೇರಿ ಸಡಗರ-ಸಂಭ್ರಮದ ಸ್ವಾಗತ ಕೋರಿದರು.
ಭಾರತ ತಂಡದ 10 ಸದಸ್ಯರಲ್ಲಿ ಒಬ್ಬರಾಗಿದ್ದ ಆನಂದಿ ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡ ಪ್ರಶಸ್ತಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಂಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿಯೂ ಆಗಿರುವ ಆನಂದಿ ಸೋಮವಾರ ತಮ್ಮ ಊರಿಗೆ ಮರಳಿದಾಗ ಆಶ್ಚರ್ಯ ಕಾದಿತ್ತು. ಗ್ರಾಮಸ್ಥರು ಅವರ ಯಶಸ್ಸಿಗೆ ಅಪಾರ ಹರ್ಷ ವ್ಯಕ್ತಪಡಿಸಿ ಪಟಾಕಿ ಸಿಡಿಸಿ, ಬ್ಯಾಂಡ್ ಸಂಗೀತ ಹಾಗೂ ಪುಷ್ಪವೃಷ್ಟಿಗಳೊಂದಿಗೆ ಅವರನ್ನು ಬರಮಾಡಿಕೊಂಡರು.
ಆನಂದಿಯವರು ಗಳಿಸಿದ ಪದಕಗಳನ್ನು ಹಾಗೂ ಸ್ಮರಣಿಕೆಗಳನ್ನು ಅತ್ಯಂತ ಸಂತೋಷದಿಂದ ವೀಕ್ಷಿಸಿದ ಗ್ರಾಮಸ್ಥರು ಅವರನ್ನು ಮನಸಾರೆ ಅಭಿನಂದಿಸುತ್ತಿದ್ದುದು ಹೃದಯಸ್ಪರ್ಶಿಯಾಗಿತ್ತು.
ಈ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಆನಂದಿಯವರು “ಈ ನನ್ನ ವಿಜಯವನ್ನು ಇಂತಹ ಸಾಧನೆ ಮಾಡಲು ನನಗೆ ಸಹಾಯ ಮಾಡಿದ ನನ್ನ ತಾಯಿ, ತಂದೆ, ತರಬೇತುದಾರರು, ಉಪಾಧ್ಯಾರು, ಹಾಗೂ ನನ್ನೆಲ್ಲಾ ಮಿತ್ರರಿಗೆ ಸಮಪರ್ಪಿಸುತ್ತೇನೆಂದು ನುಡಿದರು. ಅಲ್ಲದೇ, ನನ್ನ ದೇಶಕ್ಕೆ ಕೀರ್ತಿ ತರಲು ನನ್ನೆಲ್ಲಾ ಪ್ರಯತ್ನಗಳನ್ನೂ ಮುಂದುವರೆಸುತ್ತೇನೆಂದ ಅವರು ತಮ್ಮ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.
Indian women kabaddi team member gets warm welcome by villagers after winning gold
ಇದನ್ನೂ ಓದಿ: ಭಾರತೀಯ ಮಹಿಳಾ ಕ್ರಿಕೆಟ್ ಬಾನಂಗಳದಲ್ಲಿ ಹೊಳೆಯುವ ತಾರೆಯಾಗಿ ಉದಯಿಸಿದ ಸ್ಮೃತಿ ಮಂಧಾನ
ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್: ಬೆಳ್ಳಿ ಗೆದ್ದ ಕನ್ನಡಿಗ ಸುಹಾಸ್: ಮೋದಿ ಟ್ವಿಟ್ಟರ್ ಅಭಿನಂದನೆ
Discussion about this post