ನವದೆಹಲಿ: ಕ್ರಿಕೆಟಿಗರು ಐಪಿಎಲ್ ಟೂರ್ನಿಗಿಂತಲೂ ರಾಷ್ಟ್ರಕ್ಕಾಗಿ ಆಡುವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಮಾಜಿ ಕ್ರಿಕೆಟಿಗ, ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಹೇಳಿದ್ದಾರೆ.
ಐಸಿಸಿ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಲೀಗ್ ಹಂತದಿಂದಲೇ ಟೀಂ ಇಂಡಿಯಾ ಹೊರಬಿದ್ದ ಬೆನ್ನಲ್ಲೇ ಕಪಿಲ್ ದೇವ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಸರಿಯಾದ ಯೋಜನೆ ರೂಪಿಸಬೇಕು. ಜವಾಬ್ದಾರಿಯಿಂದ ವೇಳಾಪಟ್ಟಿ ರೂಪಿಸಬೇಕು. ಈ ಬಾರಿ ವಿಶ್ವಕಪ್ ಟೂರ್ನಿ ಸಂದರ್ಭ ಆದ ತಪ್ಪುಗಳು ಪುನರಾವರ್ತಿಸಬಾರದು ಎಂದು ಅವರು ಹೇಳಿದ್ದಾರೆ.
‘ಎಬಿಪಿ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಆಟಗಾರರು ದೇಶಕ್ಕಿಂತಲೂ ಐಪಿಎಲ್ಗೇ ಆದ್ಯತೆ ನೀಡುವುದಾದರೆ ನಾವೇನು ಹೇಳು ಸಾಧ್ಯ? ದೇಶಕ್ಕಾಗಿ ಆಡುವುದನ್ನು ಹೆಮ್ಮೆಯೆಂದು ಆಟಗಾರರು ಭಾವಿಸಬೇಕು. ಅವರ ಆರ್ಥಿಕ ಪರಿಸ್ಥಿತಿ ಬಗ್ಗೆ ನನಗೆ ತಿಳಿದಿಲ್ಲ, ಹೀಗಾಗಿ ಹೆಚ್ಚೇನೂ ಹೇಳಲಾರೆ’ ಎಂದು ಹೇಳಿದ್ದಾರೆ.
‘ಮೊದಲ ಆದ್ಯತೆ ಯಾವತ್ತೂ ದೇಶದ ತಂಡಕ್ಕೆ ನೀಡಬೇಕು. ನಂತರದ್ದು ಫ್ರಾಂಚೈಸಿಗಳಿಗೆ. ಅಲ್ಲಿ (ಐಪಿಎಲ್) ಕ್ರಿಕೆಟ್ ಆಡಬೇಡಿ ಎಂದು ನಾನು ಹೇಳಲಾರೆ. ಆದರೆ, ಕ್ರಿಕೆಟ್ ಅನ್ನು ಇನ್ನಷ್ಟು ಉತ್ತಮಗೊಳಿಸುವುದಕ್ಕಾಗಿ ಯೋಜನೆ ರೂಪಿಸಬೇಕಾದ ಜವಾಬ್ದಾರಿ ಬಿಸಿಸಿಐ ಮೇಲಿದೆ’ ಎಂದು ಅವರು ಹೇಳಿದ್ದಾರೆ.
‘ಈ ಬಾರಿ ಮಾಡಿದ ತಪ್ಪುಗಳ ಪುನರಾವರ್ತನೆಯಾಗಬಾರದು. ಇದು ನಮಗೆ ದೊಡ್ಡ ಪಾಠವಾಗಬಬೇಕು’ ಎಂದು ಅವರು ಹೇಳಿದ್ದಾರೆ.
ಕಳೆದ ಏಪ್ರಿಲ್ನಿಂದ ಐಪಿಎಲ್ ಟೂರ್ನಿಯ ಬಯೋಬಬಲ್ನಿಂದಾಗಿ ಆಟಗಾರರಿಗೆ ಮಾನಸಿಕ ಆಯಾಸವಾಗಿದೆ ಎಂದು ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಮತ್ತು ನಿರ್ಗಮಿಸುತ್ತಿರುವ ಬೌಲಿಂಗ್ ಭರತ್ ಅರುಣ್ ಹೇಳಿದ್ದರು. ಐಪಿಎಲ್ನ ಎರಡನೇ ಅವಧಿ ಮುಕ್ತಾಯವಾದ ಬಳಿಕ ವಿಶ್ರಾಂತಿಯ ಅಗತ್ಯ ಇದೆ ಎಂದು ಇಬ್ಬರೂ ಹೇಳಿದ್ದರು.
ಆದರೆ, ಐಪಿಎಲ್ ಟೂರ್ನಿ ಮುಗಿದ ಕೆಲವೇ ದಿನಗಳಲ್ಲಿ ವಿಶ್ವಕಪ್ ಟೂರ್ನಿ ಆರಂಭವಾಗಿತ್ತು. ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವುದ ಸಾಧಿಸಿದ್ದರೂ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡವು ಹೀನಾಯ ಸೋಲನುಭವಿಸಿತ್ತು. ಪರಿಣಾಮವಾಗಿ ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ನಿರ್ಗಮಿಸಬೇಕಾಗಿ ಬಂದಿತ್ತು.
ಇನ್ನಷ್ಟು…
ICC T20 WC: ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ಗೆ ಭರ್ಜರಿ ಗೆಲುವು, ಭಾರತದ ಸೆಮಿಫೈನಲ್ ಕನಸು ಭಗ್ನ
ಟ್ವೆಂಟಿ–20 ಕ್ರಿಕೆಟ್ನಲ್ಲಿ ಅತಿ ವೇಗದ 400 ವಿಕೆಟ್ ಗಳಿಸಿದ ರಶೀದ್ ಖಾನ್
ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ: ದೊಡ್ಡ ಗೌರವ ಎಂದ ‘ವಾಲ್’
Discussion about this post