ಶಾಲೆಗಳಲ್ಲಿ ಮಕ್ಕಳಿಗೆ ಪದಕ, ಪ್ರಶಸ್ತಿ ಪತ್ರಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಆದರೆ ನಾವು ಮಕ್ಕಳನ್ನು ಭವಿಷ್ಯದಲ್ಲಿ ಎದುರಾಗಬಹುದಾದ ವೈಫಲ್ಯಗಳನ್ನು ಎದುರಿಸಲು ಸಿದ್ಧಪಡಿಸುತ್ತಿದ್ದೇವೆಯೇ? ಮಕ್ಕಳ ಉತ್ಸಾಹವನ್ನು ನಿರಾಶೆಗೊಳಿಸದಿರುವ ಪ್ರಯತ್ನದಲ್ಲಿ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. ಪ್ರಶಸ್ತಿಗಳ ವಿಭಾಗಗಳನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಯಶಸ್ಸಿನ ಹಂಬಲ ಮತ್ತು ಅದರ ಅನುಭವ ಮಕ್ಕಳಲ್ಲಿ ಕಾಣದಂತಾಗಿದೆ. ಸೋಲು ಎದುರಿಸಲು ಮಕ್ಕಳನ್ನು ಹೇಗೆ ಸಿದ್ಧಪಡಿಸಬೇಕು ಎಂಬ ಬಗ್ಗೆ ಈ ಲೇಖನದಲ್ಲಿ ವಿವರಿಸಿದ್ದಾರೆ ದಿವ್ಯಶ್ರೀ ಶೇಖರ್.
ಪ್ರತಿಯೊಂದು ಮಗುವಿನಲ್ಲಿರುವ ವೈಶಿಷ್ಟ್ಯವನ್ನು ಗೌರವಿಸುವುದು ಸರಿ, ಆದರೆ ನಾವು ಮಕ್ಕಳಲ್ಲಿ ಪರಿಶ್ರಮ, ಉತ್ಸಾಹ ಮತ್ತು ಮಹಾತ್ವಾಕಾಂಕ್ಷೆಯನ್ನು ಬೆಳೆಸುವುದರಲ್ಲಿ ವಿಫಲಾರಾಗುತ್ತಿದ್ದೇವೆಯೇ? ಇಂದು ಮಕ್ಕಳು ತಮ್ಮ ಕಲಿಕಾ ಸಾಮರ್ಥವನ್ನು ತಳ್ಳಿಹಾಕುತ್ತಿದ್ದಾರೆ. ಇದರಿಂದ ಆಲಸ್ಯ, ಚಂಚಲತೆ ಮತ್ತು ಏಕಾಂತವಾಗಿರುವದು ಅವರಲ್ಲಿ ಕಾಣಿಸುತ್ತಿದೆ.
ತ್ವರಿತ ತೃಪ್ತಿ, ಅತಿಯಾದ ಸಂತೋಷದಿಂದಾಗಿ ಮಕ್ಕಳು ಸಂತೋಷದ ಅನುಭವವನ್ನು ಆನಂದಿಸುವುದರಲ್ಲಿ ಸೋಲುತ್ತಿದ್ದಾರೆ. ವರ್ಷಕ್ಕೊಮ್ಮೆ ಮೆಚ್ಚುಗೆಯ ಸಂಕೇತವಾಗಿ ಸಿಗಿತ್ತಿದ್ದ ಚಾಕಲೇಟ್ ಇಂದು ಸರ್ವೇ ಸಾಮಾನ್ಯವಾಗಿದೆ. ಕುಟುಂಬದವರೆಲ್ಲ ಒಂದುಗೂಡಿ ಮಾಡಿತ್ತಿದ್ದ ಊಟದ ಸಮಯವನ್ನು ಇಂದು ಡಿಜಿಟಲ್ ಯುಗ ತನ್ನದಾಗಿಸಿಕೊಂಡಿದೆ. ಮನುಷ್ಯ ತನ್ನ ಭಾವನೆಗಳನ್ನು ಹಂಚಿಕೊಳ್ಳದೇ ಇರುವುದರಿಂದ ಸಂಬಂಧಗಳು ಕಾಣೆಯಾಗುತ್ತಿದೆ. ಹಾಗಾದರೆ ಪೋಷಕರು ಮಕ್ಕಳನ್ನು ಹೇಗೆ ಪೋಷಿಸಿ ಬೆಳೆಸಬೇಕು?
’ಇಲ್ಲ’ ಎನ್ನುವುದರ ಪರಿಕಲ್ಪನೆ:
ಎಲ್ಲ ಪ್ರಶ್ನೆಗಳಿಗೂ ಸಕಾರಾತ್ಮಕ ಉತ್ತರವಿರುವುದಿಲ್ಲ ಎಂದು ಅರ್ಥಮಾಡಿಸಲು ನೆರವಾಗುವುದು ಏಕೆಂದರೆ ಮಕ್ಕಳ ಆಸೆ, ಕಲ್ಪನೆಗಳ್ನು ಹೇಗೆ ಪೋಷಕರು ಪೂರೈಸುತ್ತಾರೋ ಹಾಗೆ ಜಗತ್ತು ಪೂರೈಸುವುದಿಲ್ಲ. ಇದು ಅವರಲ್ಲಿ ಒತ್ತಡವನ್ನು ನಿಭಾಯಿಸುವ, ಆತ್ಮನಿರ್ಬರರಾಗಲು, ಆದ್ಯತೆಗಳಿಗೆ ಪ್ರಾಮುಖ್ಯತೆಯನ್ನು ಕೊಡಲು ಮತ್ತು ಅಹಿತಕರ ಘಟನೆಗಳನ್ನು ನಿಭಾಯಿಸ ಶಕ್ತಿಯನ್ನು ತಂದುಕೊಡುತ್ತದೆ.
ಸೋಲಿನ ಪರಿಚಯ:
ಪಾಲಕರು ತಮ್ಮ ಮಕ್ಕಳಲ್ಲಿ ಕಾಣುವ ಗೆಲುವಿನ ಹೊಳಪನ್ನು ನೋಡಲು ಆಟಗಳಲ್ಲಿ ಅವಕಾಶಗಳನ್ನು ಕೊಡುತ್ತಾ ಹೋಗುತ್ತಾರೆ. ಮಕ್ಕಳ ಸೋಲನ್ನು ನೋಡುವ ಹಾಗೂ ಮಕ್ಕಳು ಸೋತಾಗ ಹೇಗೆ ತಮ್ಮ ತಪ್ಪುಗಳನ್ನು ಸರಿಯಾಗಿಸಿ ಕೊಳ್ಳುತ್ತಾರೆ ಎಂಬುದಕ್ಕೆ ಪಾಲಕರು ಸಾಕ್ಷಿಯಾಗಬೇಕು. ಎಲ್ಲಿಯವರೆಗೆ ಮಗು ಹೋರಾಡುತ್ತದೆ ಎಂದೂ ತಿಳಿದುಕೊಳ್ಳಬೇಕು.
ವೈಫಲ್ಯದ ವಿಭಿನ್ನ ದೃಷ್ಟಿಕೋನ ಪರಿಚಯಿಸಿ:
ಮಕ್ಕಳಿಗೆ ಕಲಿಯಲು ಅವಕಾಶಗಳನ್ನು ಮಾಡಿಕೊಡಿ ಹೇಗೆಂದರೆ ಎಡಿಸನ್ರವರು ಒಂದು ಬಲ್ಬ್ನ್ನು ಕಂಡು ಹಿಡಿಯಲು ಒಂದು ಸಾವಿರ ಸಲ ಪ್ರಯತ್ನಿಸಿದರಂತೆ. ಅವರು ತಮ್ಮ 9999 ಸಲ ಮಾಡಿದ ಪ್ರಯತ್ನವನ್ನು ವೈಫಲ್ಯವೆಂದು ಕೊಳ್ಳಲಿಲ್ಲ ಬದಲಾಗಿ ಆ ಎಲ್ಲ ತಪ್ಪುಗಳನ್ನು ಮಾಡಬಾರದೆಂದು ಕಂಡುಕೊಂಡರು. ಇದು ಮಕ್ಕಳ ಭವಿಷ್ಯದಲ್ಲಿ ಎದುರಾಗಬಹುದಾದ ಕಷ್ಟಗಳನ್ನು ಎದುರಿಸುವ ಧೈರ್ಯ ತಂದುಕೊಡುತ್ತದೆ.
ಪರಿಶ್ರಮದ ಕಲೆಯನ್ನು ಪರಿಚಯಿಸಿ:
ಪೋಷಕರು ಮಕ್ಕಳಿಗೆ ಹೇಳಿಕೊಡಬೇಕಾದ ಬಹು ಮುಖ್ಯ ವಿಷಯವೆಂದರೆ ಸೋತಾಗ ಕಲಿತ ಪಾಠ , ಅದನ್ನು ಒಪ್ಪಿಕೊಳ್ಳುವ ರೀತಿ, ಭವಿಷ್ಯದಲ್ಲಿ ಆ ತಪ್ಪುಗಳನ್ನು ಮಾಡದಂತೆ ನೋಡಿಕೊಳ್ಳುವುದೇ ಆಗಿದೆ. ಬಾಲ್ಯದಿಂದಲೇ ಮಕ್ಕಳಿಗೆ ತಾಳ್ಮೆಯನ್ನು ಪರಿಚಯಿಸಿ ಅದು ಅವರ ವ್ಯಕ್ತಿತ್ವವನ್ನು ರೂಪಿಸುತ್ತದೆ.
ಸೋಲಿನ ಭಯ ಓಡಿಸಿ:
ಸೋಲನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದನ್ನು ಕಲಿಸಿ. ಅದು ಮಕ್ಕಳಲ್ಲಿ ಸರಿ ತಪ್ಪುಗಳನ್ನು ಕಂಡುಹಿಡಿಯುವ ಮತ್ತು ಸತ್ಯವಂತರಾಗುವಂತೆ ಮಾಡಲು ಸಹಾಯ ಮಾಡುತ್ತದೆ.
ಕೊನೆಯದಾಗಿ ಸೋಲೆ ಗೆಲುವಿನ ಸೋಪಾನ ಎಂಬಂತೆ ಜೀವನದಲ್ಲಿ ಸೋಲು ಮತ್ತು ಗೆಲುವುಗಳು ಅನಿವಾರ್ಯ. ಸೋತು ಗೆಲ್ಲುವದರ ಸಂತೋಷವನ್ನು ಮಕ್ಕಳಿಗೆ ತಿಳಿಸಿವುದರಿಂದ ಜೀವನದಲ್ಲಿ ಎದುರಾಗಬಹುದಾದ ಸಂಕಟಗಳನ್ನು ದೂರ ಮಾಡಿಕೊಳ್ಳಲು ಸಹಾಯವಾಗುತ್ತದೆ.
(ಕೃಪೆ: ಡೆಕ್ಕನ್ ಹೆರಾಲ್ಡ್, ಅನುವಾದ: ಅರ್ಚನಾ ಭಟ್, ಮೂಲ ಲೇಖನದ ಲಿಂಕ್: https://www.deccanherald.com/opinion/panorama/preparing-children-to-handle-failure-1060853.html )
Preparing children to handle failure
ಇದನ್ನೂ ಓದಿ: ಇನ್ಮುಂದೆ ಶಾಲಾ ಕಾಲೇಜುಗಳಲ್ಲಿ ಪ್ಲಾಸ್ಟಿಕ್ ಬಳಸುವಂತಿಲ್ಲ
Discussion about this post