ದುಬೈ: ಐಪಿಎಲ್ ಟಿ–20 ಟೂರ್ನಿಯ ಪ್ಲೇ ಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು (ಸೋಮವಾರ) ಪ್ಲೇ ಆಫ್ ಸುತ್ತಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ಫೈನಲ್ಗೆ ಪ್ರವೇಶಿಸಬೇಕಿದ್ದರೆ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಈಂತ ಸಂದರ್ಭದಲ್ಲೇ ತಂಡದ ಇಬ್ಬರು ಆಟಗಾರರು ಬಯೋಬಬಲ್ನಿಂದ (ಕೋವಿಡ್ ನಿರ್ಬಂಧದ ಕಾರಣ ತಂಡದ ಆಟಗಾರರು ಹೊರ ಜಗತ್ತಿನ ಸಂಪರ್ಕಕ್ಕೆ ಭಾರದೇ ಇರುವುದು) ಹೊರ ಹೋಗಿದ್ದಾರೆ.
ಶ್ರೀಲಂಕಾದ ವನಿಂದು ಹಸರಂಗ ಹಾಗೂ ದುಶ್ಮಂತ ಚಮೀರ ಅವರೇ ಬಯೋಬಬಲ್ ತೊರೆದ ಆಟಗಾರರು.
ಕಾರಣವೇನು?: ಶೀಘ್ರದಲ್ಲೇ ಆರಂಭವಾಗಲಿರುವ ಟಿ–20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ ತಂಡ ಭಾಗವಹಿಸಲಿದೆ. ಹೀಗಾಗಿ ಹಸರಂಗ ಹಾಗೂ ದುಶ್ಮಂತ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳುವುದಕ್ಕಾಗಿ ಐಪಿಎಲ್ನಿಂದ ನಿರ್ಗಮಿಸಿದ್ದಾರೆ.
ಇದೇ ಮೊದಲಲ್ಲ: ಟಿ–20 ವಿಶ್ವಕಪ್ ಕಾರಣಕ್ಕಾಗಿ ಆಟಗಾರರು ಐಪಿಎಲ್ ಬಯೋಬಬಲ್ ತೊರೆಯುತ್ತಿರುವುದು ಇದೇ ಮೊದಲಲ್ಲ. ಪಂಜಾಬ್ ಕಿಗ್ಸ್ ಪರ ಆಡುತ್ತಿದ್ದ ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಕ್ರಿಸ್ ಗೇಲ್ ಸಹ ಇತ್ತೀಚೆಗೆ ಐಪಿಎಲ್ ಬಯೋಬಬಲ್ ತೊರೆದಿದ್ದರು.
ಗೇಲ್ ಅವರು ಐಪಿಎಲ್ಗೂ ಮುನ್ನ ಕೆರೇಬಿಯನ್ ಪ್ರೀಮಿಯರ್ ಲೀಗ್ನಲ್ಲಿ (ಸಿಪಿಎಲ್) ಭಾಗವಹಿಸಿದ್ದರು. ಅಲ್ಲಿ ಕೂಡ ಬಯೋಬಬಲ್ ಮಾದರಿಯ ನಿರ್ಬಂಧಗಳು ಇದ್ದವು. ಹೀಗಾಗಿ ಮಾನಸಿಕವಾಗಿ ವಿಶ್ವಕಪ್ಗೆ ಸಿದ್ಧರಾಗಲು ವಿಶ್ರಾಂತಿ ಬೇಕಿದೆ ಎಂದಿದ್ದ ಗೇಲ್, ಐಪಿಎಲ್ನಿಂದ ನಿರ್ಗಮಿಸಿದ್ದರು. ಅವರು ಆಡುತ್ತಿದ್ದ ಪಂಜಾಬ್ ಕಿಂಗ್ಸ್ ತಂಡವೀಗ ಟೂರ್ನಿಯಿಂದ ಹೊರಬಿದ್ದಿದೆ.
ಇವುಗಳನ್ನೂ ಓದಿ…
ಟೋಕಿಯೋ ಒಲಂಪಿಕ್, ಪ್ಯಾರಾ ಒಲಂಪಿಕ್ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ರಾಜಭವನದಲ್ಲಿ ಸನ್ಮಾನ
ಇನ್ನೂ ಎರಡು ಎಸೆತಗಳಿರುವಂತೆಯೇ ಚೆನ್ನೈ ತಂಡವನ್ನು ಫೈನಲ್ಗೇರಿಸಿದ ಧೋನಿ
Discussion about this post