ನವದೆಹಲಿ: ನನ್ನ ಮತ್ತು ರೋಹಿತ್ ಶರ್ಮಾ ನಡುವೆ ಯಾವುದೇ ಮನಸ್ತಾಪ ಇಲ್ಲ. ಇದನ್ನು ಹಲವು ಬಾರಿ ಹೇಳಿದ್ದೇನೆ. ಈಗಲೂ ಪುನರುಚ್ಚರಿಸುತ್ತಿದ್ದೇನೆ ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡವು ಬುಧವಾರ ಪ್ರಯಾಣ ಬೆಳೆಸಿತು. ಇದಕ್ಕೂ ಮುನ್ನ ಕೊಹ್ಲಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ನನ್ನ ಮತ್ತು ರೋಹಿತ್ ಮಧ್ಯೆ ಮನಸ್ತಾಪ ಇಲ್ಲ ಎಂಬುದನ್ನು ಹೇಳಿ ಹೇಳಿ ಸಾಕಾಗಿದೆ ಎಂದು ಮಾಧ್ಯಮಗಳ ವಿರುದ್ಧ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಏಕದಿನ ನಾಯಕತ್ವದಿಂದ ತೆರವುಗೊಳಿಸುವ ಒಂದೂವರೆ ಗಂಟೆ ಮುನ್ನವಷ್ಟೇ ಬಿಸಿಸಿಐಯಿಂದ ಮಾಹಿತಿ: ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ ಒಬ್ಬ ಸಮರ್ಥ ಆಟಗಾರ. ಜೊತೆಗೆ ಉತ್ತಮ ನಾಯಕನು ಹೌದು. ನಾಯಕನಾಗಿ ಅವರು ಉತ್ತಮ ತಂತ್ರಗಾರಿಕೆ ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಒಳ್ಳೆ ಸಾಧನೆ ಮಾಡಿದ್ದಾರೆ. ರಾಹುಲ್ ದ್ರಾವಿಡ್ ಉತ್ತಮ ಕೋಚ್. ಇವರಿಬ್ಬರೂ ತಂಡಕ್ಕೆ ನನ್ನ ಕೊಡುಗೆಯನ್ನು ಬೆಂಬಲಿಸಲಿದ್ದಾರೆ ಎಂಬುದು ಖಚಿತ ಎಂದು ಕೊಹ್ಲಿ ಹೇಳಿದ್ದಾರೆ.
ನನ್ನ ಜವಾಬ್ದಾರಿ ತಂಡವನ್ನು ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಮಾಡಬೇಕಾದದ್ದು. ರೋಹಿತ್ ನಾಯಕತ್ವದಲ್ಲಿಯೂ ಅದನ್ನೇ ನಿರ್ವಹಿಸಲಿದ್ದೇನೆ. ನಾಯಕನಾಗಿದ್ದಾಗ ನನ್ನ ಮನಸ್ಥಿತಿ ಏನಿತ್ತೋ ಮುಂದೆಯೂ ಹಾಗೆಯೇ ಇರಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಏಕದಿನ ಕ್ರಿಕೆಟ್: ಟೀಂ ಇಂಡಿಯಾ ನಾಯಕತ್ವ ಬಿಟ್ಟುಕೊಡಲು ನಿರಾಕರಿಸಿದ್ದರೇ ಕಿಂಗ್ ಕೊಹ್ಲಿ?
Discussion about this post