• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
Shri News
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

Festival: ನಾಳೆ ಪವಿತ್ರ ತುಲಸೀ ವಿವಾಹದ ಹಬ್ಬ ಉತ್ಥಾನದ್ವಾದಶಿ

ಪಾವಿತ್ರ್ಯದಲ್ಲಿ ಅವಳಿಗೆ ಯಾವ ತುಲನೆಯೂ ಇರದ ಕಾರಣ ತುಲಸೀ ಎನ್ನುವ ಹೆಸರು ಬಂದಿತೆಂಬ ನಂಬಿಕೆ ಇದೆ.

Shri News Desk by Shri News Desk
Nov 15, 2021, 06:39 pm IST
in ಆಧ್ಯಾತ್ಮ, ಪರಿಸರ
Utthana Dwadashi

ಉತ್ಥಾನದ್ವಾದಶಿ ಪೂಜೆಯ ಚಿತ್ರ

Share on FacebookShare on TwitterTelegram

ಕಾರ್ತಿಕ ಮಾಸವು ಸನಾತನ ಧರ್ಮೀಯರಿಗೆ ಅತ್ಯಂತ ಪವಿತ್ರವಾದ ಮಾಸಗಳಲ್ಲೊಂದು. ಕಾರ್ತಿಕ ಮಾಸವು ಮಹಾವಿಷ್ಣು ಹಾಗೂ ಮಹೇಶ್ವರ ಇಬ್ಬರನ್ನೂ ವಿಶೇಷವಾಗಿ ಪೂಜಿಸುವ ಮಾಸವಾಗಿದೆ. ಕಾರ್ತಿಕ ಮಾಸದ ಸೋಮವಾರಗಳಂದು ಮಹೇಶ್ವರನ ಪೂಜೆ ಆರಾಧನೆಗಳು ವಿಶೇಷವಾದರೆ ಕಾರ್ತಿಕ ಮಾಸದಲ್ಲೇ ಬರುವ ದೀಪಾವಳಿ ಸಮಯದಲ್ಲಿ ವಿಷ್ಣು ಹಾಗೂ ಲಕ್ಷ್ಮಿಯರನ್ನು ಪೂಜಿಸಲಾಗುತ್ತದೆ. ಆಷಾಢ ಶುದ್ಧ ಏಕಾದಶಿಯಂದು (ಶಯನೈಕಾದಶಿ) ಯೋಗನಿದ್ರೆಗೆ ಜಾರುವ ಮಹಾವಿ‍ಷ್ಣುವು ಕಾರ್ತಿಕ ಮಾಸದ ಶುದ್ಧ ದ್ವಾದಶಿಯಂದು ತನ್ನ ಯೋಗನಿದ್ರೆಯಿಂದ ಏಳುತ್ತಾನೆ, ಅದಕ್ಕಾಗಿಯೇ ಅದನ್ನು ಉತ್ಥಾನದ್ವಾದಶಿ ಎನ್ನುವುದು. ವಿ‍ಷ್ಣುವು ಯೋಗನಿದ್ರೆಯಲ್ಲಿರುವ ನಾಲ್ಕು ತಿಂಗಳ ಕಾಲ ವಿವಾಹವೇ ಮೊದಲಾದ ಶುಭಕಾರ್ಯಗಳನ್ನು ಇಂದಿಗೂ ದೇಶದ ಕೆಲಭಾಗಗಳಲ್ಲಿ ಕೈಗೊಳ್ಳುವುದಿಲ್ಲ.

ಸಮುದ್ರ ಮಥನ ಕಾಲದಲ್ಲಿ ಅಮೃತಕಳಶವು ಉದ್ಭವಿಸಿದಾಗ ಸಂತಸಗೊಂಡ ಮಹಾವಿಷ್ಣುವಿನ ಕಂಗಳಿಂದ  ಹೊರಬಿದ್ದ ಆನಂದಾಶ್ರುಗಳು ಅದರಲ್ಲಿ ಬಿದ್ದಾಗ ಮಹಾಲಕ್ಷ್ಮಿಯೇ ತುಲಸೀ ಸಸ್ಯವಾಗಿ ಅವತರಿಸಿದಳೆಂಬ ನಂಬಿಕೆಯೂ ಇದೆ.  ಪಾವಿತ್ರ್ಯದಲ್ಲಿ ಅವಳಿಗೆ ಯಾವ ತುಲನೆಯೂ ಇರದ ಕಾರಣ ಇವಳಿಗೆ ತುಲಸೀ ಎನ್ನುವ ಹೆಸರು ಬಂದಿತೆಂಬ ನಂಬಿಕೆ ಇದೆ. ರುಕ್ಮಿಣಿ ಹಾಗೂ ಸತ್ಯಭಾಮೆಯರಲ್ಲಿ ನಾನು ಹೆಚ್ಚು-ತಾನು ಹೆಚ್ಚು ಎನ್ನುವ ಸ್ಪರ್ಧೆ ಏರ್ಪಟ್ಟಾಗ ಕೃಷ್ಣ ತುಲಾಭಾರ ನಡೆದು ತಕ್ಕಡಿಯಲ್ಲಿ ಒಂದು ಕಡೆ ಕೃಷ್ಣನನ್ನು ಕೂಡಿಸಿ ಇನ್ನೊಂದು ಕಡೆ ಸತ್ಯಭಾಮೆ ತನ್ನ ರಾಶಿ-ರಾಶಿ ಒಡವೆಗಳನ್ನು ಹಾಕಿದರೂ ತಕ್ಕಡಿ ಮೇಲೇಳುವುದಿಲ್ಲ. ಆಗ ಲಕ್ಷ್ಮಿಯ ಅಂಶವೇ ಆದ ರುಕ್ಮಿಣಿಯು ಒಂದೇ ಒಂದು ತುಳಸೀ ದಳವನ್ನು ತಕ್ಕಡಿಗೆ ಹಾಕಿದಾಗ ಕೃಷ್ಣನಿದ್ದ ತಕ್ಕಡಿ ಮೇಲೆದ್ದು ರುಕ್ಮಿಣಿಯೇ ಗೆಲ್ಲುತ್ತಾಳೆ. ಇದು ತುಳಸಿಯ ಮಹಿಮೆ.

ಅಸುರನಾದ ಜಲಂಧರನು ಲೋಕಕಂಟಕನಾಗಿ ಅಜೇಯನಾಗಿರುತ್ತಾನೆ. ತ್ರಿಮೂರ್ತಿಗಳಿಗೂ ಅವನ ಸಂಹಾರ ಮಾಡಲು ಸಾಧ್ಯವಿರದ ಪರಿಸ್ಥಿತಿ ಏರ್ಪಡುತ್ತದೆ. ಇದಕ್ಕೆ ಕಾರಣ ಅವನ ಪತ್ನಿಯಾದ ತುಲಸೀ ದೇವಿಯ ಪಾತಿವ್ರತ್ಯದ ಪರಮಶಕ್ತಿ. ಲೋಕಕಂಟಕನಾದ ಜಲಂಧರನ್ನು ಸಂಹಾರ ಮಾಡಬೇಕೆಂದರೆ ತುಲಸಿಯ ಪಾತಿವ್ರತ್ಯದ ಭಂಗವಾಗಲೇಬೇಕೆಂಬುದನ್ನು ಮನಗಂಡ ಮಹಾವಿಷ್ಣುವು ಜಲಂಧರನ ರೂಪದಲ್ಲೇ ತುಲಸಿಯ ಬಳಿ ಹೋಗಿ ದೇವತೆಗಳೊಂದಿಗಿನ ಯುದ್ಧದಲ್ಲಿ ತಾನು ವಿಜಯಿಯಾಗಿ ಬಂದಿದ್ದೇನೆಂದು ತಿಳಿಸಿದಾಗ ಸಂತೋಷಗೊಂಡ ತುಲಸಿಯು ಅವನನ್ನು ಉಪಚರಿಸಿ ಸಮಾಗಮ ಹೊಂದಿದ ನಂತರ ಕೆಲವು ಕುರುಹುಗಳಿಂದ ಇವನು ತನ್ನ ಪತಿಯಲ್ಲವೆಂಬ ಶಂಕೆಯಿಂದ ದೂರ ನಿಲ್ಲುತ್ತಾಳೆ. ಆಗ ವಿಷ್ಣವು ನಿನ್ನ ಪತಿ ಲೋಕಕಂಟಕನಾಗಿದ್ದು ನಿನ್ನ ಪಾತಿವ್ರತ್ಯದ ಬಲದಿಂದಲೇ ಅಜೇಯನಾಗಿವುದರಿಂದ ನಾನು ಈ ರೀತಿ ಮಾಡಬೇಕಾಯಿತು, ಚಿಂತಿಸಬೇಡ, ಮುಂದೆ ನಿನಗೆ ನನ್ನ ಪತ್ನಿಯ ಸ್ಥಾನ ದೊರೆಯುತ್ತದೆಂದು ವರದಾನ ನೀಡಿದನು. ಜಲಂಧರನ ಮರಣದ ನಂತರ ತುಲಸಿಯು ಗಿಡವಾಗುತ್ತಾಳೆ ಎನ್ನುವ ಪ್ರತೀತಿ ಇದೆ. ಇದರ ಜೊತೆಗೆ ಇನ್ನೊಂದು ನಂಬಿಕೆಯಂತೆ ವೃಂದೆಯು ಪತಿಯ ಮರಣದ ನಂತರ ಚಿತೆಯನ್ನು ನಿರ್ಮಿಸಿಕೊಂಡು ಮಂಗಳದಾಯಿನಿ ಪಾರ್ವತಿಮಾತೆಯನ್ನು ಸ್ಮರಿಸುತ್ತಾ ಅಗ್ನಿಪ್ರವೇಶ ಮಾಡಿದಾಗ ಮಾತೆ ಪಾರ್ವತಿಯು ಆ ಆಗ್ನಿಕುಂಡವನ್ನು ತುಳಸಿ, ನೆಲ್ಲಿ, ಹಾಗೂ ಜಾಜಿ ಗಿಡಗಳಿಂದ ನಂದನವನವನ್ನಾಗಿ ಮಾಡಿದಳೆನ್ನುವ ನಂಬಿಕೆಯೂ ಇದೆ.

ವಿಷ್ಣವಿಗೆ ಪರಮಪ್ರಿಯಳಾದ ತುಲಸಿಯ ವಿವಾಹವನ್ನು ಉತ್ಥಾನದ್ವಾದಶಿಯೆಂದು ಆಚರಿಸಲಾಗುತ್ತದೆ. ವೃಂದಾವನ ಅಥವಾ ತುಲಸೀಕಟ್ಟೆಯಲ್ಲಿ ಅಂದು ನೆಲ್ಲಿಯ ಕೊಂಬೆಯೊಂದನ್ನು ನೆಟ್ಟು ಅಲಂಕರಿಸಿ ದೀಪಗಳನ್ನು ಹಚ್ಚಿ ಪೂಜೆ ಮಾಡುವ ಪದ್ಧತಿಯಿದೆ. ಅಂದು ಪೂಜಾ ಸಮಯದಲ್ಲಿ ಕೆಳಗೆ ನೀಡಲಾಗಿರುವ ಶ್ಲೋಕವನ್ನು ಪಠಿಸಲಾಗುತ್ತದೆ.

ನಮ: ತುಲಸಿ ಕಲ್ಯಾಣೀ ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವೀ ನಮಃ ಸಂಪತ್ಪ್ರದಾಯಿನೀ ||

ತುಲಸಿಯ ಮಹಿಮೆ ಇಷ್ಟಕ್ಕೇ ನಿಲ್ಲುವುದಿಲ್ಲ. ತುಲಸಿಯು ಒಂದು ಪರಮ ಪವಿತ್ರ ಸಸ್ಯವಾಗಿರುವುದರ ಜೊತೆಗೆ ಒಂದು ಅತ್ಯಂತ ಪ್ರಭಾವಶಾಲಿ ಔಷಧ ಸಸ್ಯವೂ ಆಗಿದ್ದು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ತುಲಸಿಯಲ್ಲಿ ಎರಡು ಮುಖ್ಯವಿಧಗಳಿದ್ದು ಒಂದು ಬಿಳಿ ತುಲಸಿಯಾದರೆ ಇನ್ನೊಂದು ಕೃಷ್ಣತುಲಸಿ. ಎರಡರಲ್ಲೂ ಒಂದೇ ಸಮನಾದ ಔಷಧೀಯ ಗುಣಗಳಿದ್ದು ಕೆಲ ಗಂಟಲಿನ ಸಮಸ್ಯೆಗಳಿಗೆ, ಬೊಜ್ಜು,ಮರೆವು, ಮಧುಮೇಹ, ರಕ್ತದ ಏರೊತ್ತಡ, ಸೋರಿಯಾಸಿಸ್, ಖಿನ್ನತೆ, ಹಾಗೂ ಅನೇಕ ಚರ್ಮರೋಗಗಳಿಗೆ ತುಲಸಿಯು ದಿವ್ಯೌಷಧವಾಗಿದೆ. ಇಂತಹ ಪವಿತ್ರಳಾದ ಮಾತೆ ತುಲಸಿಯನ್ನು ಪೂಜಿಸುವ ಉತ್ಥಾನದ್ವಾದಶಿಯ ಈ ಸುಸಂದರ್ಭದಲ್ಲಿ (ನಾಳೆ ನ.16) ಆಕೆಯು ಸರ್ವರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸೋಣ.

Tomorrow is Tulasi Vivaha Festival Utthana Dwaadashi

ಇದನ್ನೂ ಓದಿ: Diabetes: ಹಬ್ಬದ ಸಾಲಿನಲ್ಲಿ ಮಧುಮೇಹ ನಿಯಂತ್ರಣಕ್ಕೆ ಟಿಪ್ಸ್

ಇದನ್ನೂ ಓದಿ: Gopuja: ದೀಪಾವಳಿ ಹಬ್ಬದಂದು ದೇವಾಲಯಗಳಲ್ಲಿ ಗೋಪೂಜೆ ಮಾಡಿ

Tags: festivalTOP NEWS
ShareSendTweetShare
Join us on:

Related Posts

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In