• Home
  • About Us
  • Contact Us
  • Terms of Use
  • Privacy Policy
Wednesday, June 18, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
Shri News
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಕ್ರೈಂ

ಕೇಶ ಸೌಂದರ್ಯಕ್ಕೆ ಎರವಾದ ಕೆಟ್ಟ ‘ಕೇಶ ವಿನ್ಯಾಸ‌’

ರೂಪದರ್ಶಿಗೆ ರೂ. 2 ಕೋಟಿ ಪರಿಹಾರ ನೀಡಲು ಗ್ರಾಹಕ ಆಯೋಗದ ಆದೇಶ

Shri News Desk by Shri News Desk
Sep 25, 2021, 04:02 am IST
in ಕ್ರೈಂ
consumer court news

consumer court news

Share on FacebookShare on TwitterTelegram

ಪ್ರಕರಣದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ತೋರುವ ಮೂಲಕ ಐಟಿಸಿ ಮೌರ್ಯ ಹೊಟೆಲ್‌ ಸಮೂಹವು ದೋಷಿಯಾಗಿದ್ದು ರೂಪದರ್ಶಿಯ ತಲೆಯ ಚರ್ಮದ ಉರಿತ, ಕೆರೆತಕ್ಕೆ ಕಾರಣವಾಗಿರುವುದನ್ನು ಆಯೋಗವು ಮನಗಂಡಿತು.

ಕೆಟ್ಟ ಕೇಶ ವಿನ್ಯಾಸ ಹಾಗೂ ಕೇಶ ಶುಶ್ರೂಷೆಗಳು ಮಾನಸಿಕ ಆಘಾತಕ್ಕೆ ಕಾರಣವಾಗುವುದಲ್ಲದೆ, ಉತ್ತಮ ಉದ್ಯೋಗಾವಕಾಶಗಳಿಗೆ ಎರವಾಗುತ್ತವೆ. ಹಾಗಾಗಿ, ಅಂತಹ ಕ್ರಿಯೆಗಳು ಸೌಂದರ್ಯವರ್ಧಕ ಸಲೂನ್‌ಗಳ ನಿರ್ಲಕ್ಷ್ಯವನ್ನು ಎತ್ತಿತೋರುತ್ತವೆ ಎಂದು ಇತ್ತೀಚಿನ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿರುವ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು (ಎನ್‌ಸಿಡಿಆರ್‌ಸಿ) ರೂ.2 ಕೋಟಿ ಪರಿಹಾರವನ್ನು ಮಹಿಳಾ ಗ್ರಾಹಕರೊಬ್ಬರಿಗೆ ನೀಡುವಂತೆ ಐಟಿಸಿ ಹೊಟೆಲ್‌ ಸಮೂಹಕ್ಕೆ ಆದೇಶಿಸಿದೆ. ತನ್ನ ಸಲೂನ್‌ ಮೂಲಕ ಕೇಶ ಸೇವೆಯನ್ನು ನೀಡುವಲ್ಲಿ ಲೋಪವೆಸಗಿದ ಪಂಚತಾರಾ ಹೊಟೆಲ್‌ ಐಟಿಸಿ ಮೌರ್ಯಗೆ ರೂಪದರ್ಶಿ ಆಶ್ನಾ ರಾಯ್ ಅವರಿಗೆ ಪರಿಹಾರ ನೀಡುವಂತೆ ಅಯೋಗ ಸೂಚಿಸಿದೆ [ಆಶ್ನಾ ರಾಯ್‌ ವರ್ಸಸ್‌ ಐಟಿಸಿ ಹೊಟೆಲ್‌ ಸಮೂಹ].

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ನ್ಯಾ. ಆರ್‌ ಕೆ ಅಗರ್‌ವಾಲ್ ಮತ್ತು ಸದಸ್ಯ ಡಾ. ಎಸ್‌ ಎಂ ಕಾನಿಟ್ಕರ್‌ ಅವರಿದ್ದ ಪೀಠವು ಮಹಿಳೆಯರು ತಮ್ಮ ಕೇಶದ ವಿಷಯದಲ್ಲಿ ಅತ್ಯಂತ “ಜಾಗರೂಕತೆ ಮತ್ತು ಎಚ್ಚರ”ದಿಂದ ಇರುತ್ತಾರೆ. “ತಮ್ಮ ಕೇಶರಾಶಿಯನ್ನು ಉತ್ತಮವಾಗಿರಿಸಿಕೊಳ್ಳಲು ಸಾಕಷ್ಟು ಹಣವನ್ನು ವ್ಯಯಿಸುತ್ತಾರೆ. ತಮ್ಮ ತಲೆಗೂದಲೊಂದಿಗೆ ಅವರಿಗೆ ಭಾವುಕ ನಂಟಿರುತ್ತದೆ,” ಎಂದು ಅಭಿಪ್ರಾಯಪಟ್ಟಿತು.

ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠವು ಅರ್ಜಿದಾರೆಯಾದ ಆಶ್ನಾ ರಾಯ್ ಅವರು ಓರ್ವ ರೂಪದರ್ಶಿಯಾಗಿದ್ದು ತಮ್ಮ ಉದ್ದನೆಯ, ಉತ್ತಮ ಕೇಶದ ಕಾರಣಕ್ಕಾಗಿ ವಿಎಲ್‌ಸಿಸಿ ಮತ್ತು ಪ್ಯಾಂಟೀನ್‌ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದನ್ನು ವಿಶೇಷವಾಗಿ ಗಮನಿಸಿತು. “ಅರ್ಜಿದಾರೆಯ ನಿರ್ದೇಶನಗಳಿಗೆ ವಿರುದ್ಧವಾಗಿ ಎರಡನೆಯ ಪಕ್ಷಕಾರರು (ಐಟಿಸಿ ಹೊಟೆಲ್ ಸಮೂಹ) ನಡೆದುಕೊಂಡಿರುವುದರಿಂದ ಆಕೆಯು ತನ್ನ ನಿರೀಕ್ಷಿತ ಯೋಜನೆಗಳನ್ನು ಕಳೆದುಕೊಳ್ಳುವಂತಾಯಿತು, ಗಂಭೀರ ಪ್ರಮಾಣದ ನಷ್ಟವನ್ನು ಅನುಭವಿಸುವಂತಾಯಿತು. ಇದು ಆಕೆಯ ಜೀವನ ಶೈಲಿಗೆ ಎರವಾಗಿ, ಮುಂಚೂಣಿ ರೂಪದರ್ಶಿಯಾಗುವ ಕನಸಿಗೆ ಅಡ್ಡಿಯಾಯಿತು,” ಎಂದು ಆಯೋಗವು ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಇದಲ್ಲದೆ, ಐಟಿಸಿ ಹೊಟೆಲ್‌ ಸಮೂಹವು ರೂಪದರ್ಶಿಯ ಕೇಶ ಶುಶ್ರೂಷೆಯನ್ನು ಮಾಡುವ ವೇಳೆ ವೈದ್ಯಕೀಯ ನಿರ್ಲಕ್ಷ್ಯ ತೋರುವ ಮುಖೇನ ದೋಷಿಯಾಗಿದೆ ಎಂದೂ ಸಹ ಆಯೋಗ ಹೇಳಿದೆ. “ಆಕೆಯ ತಲೆಯ ಚರ್ಮ ಸುಟ್ಟಿದೆ, ಈಗಲೂ ಸಹ ಆಕೆ ಎರಡನೇ ಪಕ್ಷಕಾರರ (ಐಟಿಸಿ ಹೊಟೆಲ್ ಸಮೂಹ) ತಪ್ಪಿನಿಂದಾಗಿ ಅಲರ್ಜಿ, ತುರಿಕೆ ಅನುಭವಿಸುತ್ತಿದ್ದಾರೆ,” ಎಂದು ಕೋರ್ಟ್‌ ತನ್ನ ಆದೇಶದಲ್ಲಿ ದಾಖಲಿಸಿದೆ. ಅಂತಿಮವಾಗಿ ಆಯೋಗವು ರೂ 2 ಕೋಟಿ ಪರಿಹಾರವನ್ನು ರೂಪದರ್ಶನಿ ಆಶ್ನಾ ರಾಯ್‌ ಅವರಿಗೆ ನೀಡುವಂತೆ ಐಟಿಸಿ ಹೊಟೆಲ್‌ ಸಮೂಹಕ್ಕೆ ಆದೇಶಿಸಿತು.

ಹಿನ್ನೆಲೆ:

ಅರ್ಜಿದಾರೆ ರೂಪದರ್ಶಿಯಾದ ಆಶ್ನಾ ರಾಯ್‌ ನವದೆಹಲಿಯಲ್ಲಿರುವ ಐಟಿಸಿ ಮೌರ್ಯ ಹೊಟೆಲ್‌ನ ಸಲೂನ್‌ಗೆ ಏಪ್ರಿಲ್‌ 12, 2018 ರಂದು ಕೇಶ ವಿನ್ಯಾಸಕ್ಕಾಗಿ ಭೇಟಿ ಇತ್ತರು. ಆಕೆ, ಆನಂತರದ ವಾರದಲ್ಲಿ ಸಂದರ್ಶನ ಸಮಿತಿಯೊಂದರ ಮುಂದೆ ಯೋಜನೆಯೊಂದರ ಸಲುವಾಗಿ ಕಾಣಿಸಿಕೊಳ್ಳಬೇಕಿದ್ದರಿಂದ ಕೇಶ ವಿನ್ಯಾಸ ಮಾಡಿಸಿಕೊಳ್ಳುವ ಅಗತ್ಯತೆ ಅವರಿಗಿತ್ತು. ಸಲೂನ್‌ನಲ್ಲಿ ತಾವು ಯಾವಾಗಲೂ ಕೇಶ ವಿನ್ಯಾಸ ಮಾಡಿಸಿಕೊಳ್ಳುತ್ತಿದ್ದ ಹೇರ್‌ಡ್ರೆಸರ್‌ಗಾಗಿ ಆಶ್ನಾ ಬೇಡಿಕೆ ಇರಿಸಿದರು. ಆದರೆ, ಆಕೆ ಲಭ್ಯವಿಲ್ಲದ ಕಾರಣಕ್ಕೆ ಮತ್ತೋರ್ವ ವಿನ್ಯಾಸಕಾರ್ತಿಯನ್ನು ಅವರಿಗೆ ನೀಡಲಾಯಿತು.

ಕೇಶ ವಿನ್ಯಾಸದ ವೇಳೆ ಆಶ್ನಾ ರಾಯ್‌ ಅವರ ಅಣತಿಗೆ ವಿರುದ್ಧವಾಗಿ ವಿನ್ಯಾಸಕಾರ್ತಿಯು ಅವರ ತಲೆಗೂದಲನ್ನು ಕತ್ತರಿಸಿದ್ದರು. ಉದ್ದವಿರುವ ತಲೆಗೂದಲನ್ನು ‘ಲಾಂಗ್‌ ಫ್ಲಿಕ್ಸ್/ಲೇಯರ್ಸ್’ ರೀತಿಯಲ್ಲಿ ಬರುವಂತೆ, ನಾಲ್ಕು ಇಂಚಷ್ಟೇ ಉದ್ದವನ್ನು ಕಡಿಮೆ ಮಾಡುವಂತೆ ಆಶ್ನಾ ಸೂಚಿಸಿದ್ದರು. ಆಶ್ನಾ ಕನ್ನಡಕವನ್ನು ಧರಿಸುತ್ತಿದ್ದ ಕಾರಣಕ್ಕೆ ಹಾಗೂ ದೃಷ್ಟಿ ದೋಷವನ್ನು ಹೊಂದಿದ್ದರಿಂದ ಒಮ್ಮೆ ಕೇಶ ವಿನ್ಯಾಸಕ್ಕೆ ಕೂತು ತಲೆತಗ್ಗಿಸಿದ ನಂತರ ಅವರಿಗೆ ತಲೆ ಮೇಲೆ ಎತ್ತಿ ತಮ್ಮ ಕೇಶ ವಿನ್ಯಾಸವನ್ನು ಗಮನಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇತ್ತ ವಿನ್ಯಾಸವನ್ನು ಮಾಡಿದ ವಿನ್ಯಾಸಕಾರ್ತಿಯು ಕೇವಲ ನಾಲ್ಕು ಇಂಚು ಕೂದಲನ್ನು ಮಾತ್ರವೇ ಉಳಿಸಿ ಉಳಿದ ತಲೆಕೂದಲನ್ನು ಕತ್ತರಿಸಿದ್ದಳು. ಇದರಿಂದ ಆಶ್ನಾ ತೀವ್ರ ಆಘಾತಕ್ಕೆ ಒಳಗಾದರು. ಆಶ್ನಾ ಹೇಳಿದ್ದ ವಿನ್ಯಾಸಕ್ಕೆ ಬದಲಾಗಿ, ವಿನ್ಯಾಸಕಾರ್ತಿಯು ತುಂಡುಗೂದಲಿನ ‘ಲಂಡನ್‌ ಹೇರ್‌ಕಟ್‌’ ವಿನ್ಯಾಸವನ್ನು ಮಾಡಿದ್ದರು.

ಇತ್ತ ತನ್ನ ಈ ಅನಪೇಕ್ಷಿತ ಕೇಶ ವಿನ್ಯಾಸದಿಂದಾಗಿ ಆಶ್ನಾ ಹೊರಗೆ ಹೋಗುವುದನ್ನು ನಿಲ್ಲಿಸುವಂತಾಯಿತು. ಅವರ ಬಿಡುವಿಲ್ಲದ ದಿನಚರಿಯ ಜೀವನಶೈಲಿಗೆ ಇದು ಹೊಡೆತ ನೀಡಿತು. ತಪ್ಪೆಸಗಿದ ಹೊಟೆಲ್‌ ಸಿಬ್ಬಂದಿ, ವ್ಯವಸ್ಥಾಪಕರು ಮತ್ತು ಆಶ್ನಾ ನಡುವೆ ಹಲವು ಸುತ್ತಿನ ಮಾತುಕತೆ ನಡೆಯಿತು. ಈ ವೇಳೆ, ತನ್ನ ಕತ್ತರಿಸಿದ ತಲೆ ಕೂದಲನ್ನು ಸಹ ಹೊಟೆಲ್‌ ಮಾರಿಕೊಂಡಿರುವುದನ್ನು ಆಶ್ನಾ ಅರಿತರು.

ಆಶ್ನಾ ಅವರಿಗೆ ಉಚಿತವಾಗಿ ಕೇಶ ಶುಶ್ರೂಷೆ ನೀಡಲು ಹೊಟೆಲ್‌ ಮುಂದಾಯಿತು. ಅಂತಿಮವಾಗಿ ಇದಕ್ಕೆ ಒಪ್ಪಿದ ಆಶ್ನಾ ಕೇಶ ಶುಶ್ರೂಷೆಗೆ ಮುಂದಾದರು. ಆದರೆ, ಈ ಸಂದರ್ಭದಲ್ಲಿಯೂ ಸಹ ಸಲೂನ್ ಸಿಬ್ಬಂದಿಯಿಂದ ಮತ್ತೆ ವೈದ್ಯಕೀಯ ನಿರ್ಲಕ್ಷ್ಯ ಎದುರಾಗಿ ಆಶ್ನಾ ಅವರ ತಲೆಯ ಚರ್ಮ ರಾಸಾಯನಿಕಗಳಿಂದ ಸುಟ್ಟು, ಉರಿ, ತುರಿಕೆಗೆ ಕಾರಣವಾಯಿತು. ಅಂತಿಮವಾಗಿ, ಹೊಟೆಲ್‌ ಮತ್ತು ಆಶ್ನಾ ನಡುವೆ ತೀವ್ರ ತರಹದ ಮನಸ್ತಾಪ ಮೂಡಿ ಆಶ್ನಾ ರಾಷ್ಟ್ರೀಯ ಗ್ರಾಹಕ ವ್ಯಾಹ್ಯಗಳ ಪರಿಹಾರ ಆಯೋಗದ ಮುಂದೆ ತನ್ನ ರೂಪದರ್ಶಿ ವೃತ್ತಿಯೊಂದಿಗೆ ಚೆಲ್ಲಾಟವಾಡಿದ ಹೊಟೆಲ್‌ ವಿರುದ್ಧ ಮೊಕದ್ದಮೆ ಹೂಡಿದರು. ಇದೀಗ ಪರಿಹಾರ ನೀಡುವಂತೆ ಐಟಿಸಿ ಹೊಟೆಲ್ ಸಮೂಹಕ್ಕೆ ನ್ಯಾಯಾಲಯ ಆದೇಶಿಸಿದೆ

ಕೃಪೆ: ಬಾರ್ ಅಂಡ್ ಬೆಂಚ್

Tags: Court news
ShareSendTweetShare
Join us on:

Related Posts

Uttar Pradesh News: ತಾಳಿ ಕಟ್ಟುವಾಗ ವರನ ಎಡವಟ್ಟು, ಮಂಟಪದಲ್ಲೇ ಮಾರಾಮಾರಿ ಶುರು

Vijayapura News: ಕ್ರೈಂಗಳಿಗೆ ಬ್ರೇಕ್ ಹಾಕಬೇಕಿರುವ ಪೋಲೀಸರಿಂದಲೇ ನಾಚಿಕೆಗೇಡಿನ ಕೆಲಸ

ಮಲಗಿದ್ದ ವ್ಯಕ್ತಿಯ ಮಾಲೆ ಗೋಡೆ ಕುಸಿದು ವ್ಯಕ್ತಿ ಸಾವು

ರಾಮನಗರದಲ್ಲಿ ಬಾಲಕಿ ಹ*ತ್ಯೆ ಕೇಸ್‌ಗೆ ಬಿಗ್ Twist: ಹಾಗಾದ್ರೆ ಆ ಸ್ಥಳದಲ್ಲಿ ನಡೆದಿದ್ದಾದರೂ ಏನು..?

ಮಾರ್ಚ್‌ನಲ್ಲೇ ನಡೆದಿತ್ತಾ ಹಿಂದೂ ಕಾರ್ಯಕರ್ತನ ಹ*ತ್ಯೆಗೆ ಪ್ಲಾನ್..?  Troll ಪೇಜ್ Post ಹೇಳುತ್ತಿದೆ ಕಹಿ ಸತ್ಯ

ಮಾರ್ಚ್‌ನಲ್ಲೇ ನಡೆದಿತ್ತಾ ಹಿಂದೂ ಕಾರ್ಯಕರ್ತನ ಹ*ತ್ಯೆಗೆ ಪ್ಲಾನ್..? Troll ಪೇಜ್ Post ಹೇಳುತ್ತಿದೆ ಕಹಿ ಸತ್ಯ

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹ*ತ್ಯೆ: ಫಾಜಿಲ್‌ ಹ*ತ್ಯೆಗೈದವ ನಡುರಸ್ತೆಯಲ್ಲೇ ಫಿನಿಶ್

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹ*ತ್ಯೆ: ಫಾಜಿಲ್‌ ಹ*ತ್ಯೆಗೈದವ ನಡುರಸ್ತೆಯಲ್ಲೇ ಫಿನಿಶ್

ಮಹಿಳೆಯರ ವಿರುದ್ಧ ದ್ವೇಷ ಪ್ರಸರಣ: ಬುಲ್ಲಿ ಬಾಯ್ಸ್​ ಆ್ಯಪ್​ನ ಗಿಟ್​ಹಬ್​ ನಿಷೇಧ

ಮಹಿಳೆಯರ ವಿರುದ್ಧ ದ್ವೇಷ ಪ್ರಸರಣ: ಬುಲ್ಲಿ ಬಾಯ್ಸ್​ ಆ್ಯಪ್​ನ ಗಿಟ್​ಹಬ್​ ನಿಷೇಧ

Driver dies: ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

Driver dies: ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Two killed: ಬೈಕ್‌ಗೆ ಮಹೀಂದ್ರಾ ಪಿಕಪ್ ಡಿಕ್ಕಿ ಇಬ್ಬರು ಸಾವು

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಹೀಗೆ ಮಾಡಿದರೆ ಏನಾಗುತ್ತದೆ..?

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In