• Home
  • About Us
  • Contact Us
  • Terms of Use
  • Privacy Policy
Saturday, June 21, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
Shri News
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

ನಾರ್ವೆಯ ಕಾಂಗ್ಸ್‌ಬರ್ಗ್‌ನಲ್ಲಿ ಬಿಲ್ಲು-ಬಾಣಗಳಿಂದ ದಾಳಿ ನಡೆಸಿ 5 ಜನರ ಹತ್ಯೆ, ಶಂಕಿತನ ಬಂಧನ

ದಾಳಿಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ, ಭಯೋತ್ಪಾದಕ ಕೃತ್ಯವನ್ನು ತಳ್ಳಿಹಾಕಲಾಗದು

Shri News Desk by Shri News Desk
Oct 14, 2021, 12:11 pm IST
in ಅಂತರಾಷ್ಟ್ರೀಯ
ನಾರ್ವೆಯ ಕಾಂಗ್ಸ್‌ಬರ್ಗ್‌ನಲ್ಲಿ ಶಂಕಿತನಿಂದ ಸಾರ್ವಜನಿಕರ ಮೇಲೆ ಬಿಲ್ಲು-ಬಾಣಗಳಿಂದ ದಾಳಿ

ನಾರ್ವೆಯ ಕಾಂಗ್ಸ್‌ಬರ್ಗ್‌ನಲ್ಲಿ ಶಂಕಿತನಿಂದ ಸಾರ್ವಜನಿಕರ ಮೇಲೆ ಬಿಲ್ಲು-ಬಾಣಗಳಿಂದ ದಾಳಿ

Share on FacebookShare on TwitterTelegram

ಕಾಂಗ್ಸ್‌ಬರ್ಗ್‌ (ನಾರ್ವೆ): ಬಿಲ್ಲು-ಬಾಣಗಳಿಂದ ಸಜ್ಜಿತನಾಗಿದ್ದ ವ್ಯಕ್ತಿಯೋರ್ವನು ಬುಧವಾರ ಸಂಜೆ ನಾರ್ವೆಯ ಆಗ್ನೇಯ ಭಾಗದ ಕಾಂಗ್ಸ್‌ಬರ್ಗ್ ಎಂಬಲ್ಲಿ ಹಠಾತ್ ದಾಳಿ ನಡೆಸಿ 5 ಜನರ ಹತ್ಯೆ ಮಾಡಿ ಇಬ್ಬರನ್ನು ಗಾಯಗೊಳಿಸಿದ್ದು ಅವನನ್ನು ಬಂಧಿಸಿದ್ದೇವೆ ಎಂದ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಕಾಂಗ್ಸ್‌ಬರ್ಗ್ ನಗರದ ಹೃದಯಭಾಗದ ಅನೇಕ ಪ್ರದೇಶಗಳಲ್ಲಿ ನಡೆದಿರುವ ದಾಳಿಗಳ ಹಿಂದಿನ ನೈಜ ಉದ್ದೇಶ ಇನ್ನೂ ತಿಳಿದುಬಂದಿಲ್ಲವಾದರೂ ಭಯೋತ್ಪಾದಕ ಕೃತ್ಯದ ಉದ್ದೇಶಗಳನ್ನು ತಳ್ಳಿಹಾಕುವಂತಿಲ್ಲ ಎಂದು ತಿಳಿಸಿದ ಪೋಲೀಸ್ ಅಧಿಕಾರಿ, ಓಯ್‌ವಿಂಡ್ ಆಸ್, ಕೃತ್ಯದಲ್ಲಿ 5 ಜನ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಗಾಯಗೊಂಡಿರುವ ಇಬ್ಬರು ಆಸ್ಪತ್ರೆಯ ತುರ್ತು ಚಿಕಿತ್ಸಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಪ್ರಾಣಗಳಿಗೆ ಅಪಾಯವಿದೆಯಂದೇನೂ ಎನಿಸುತ್ತಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗಾಯಗೊಂಡಿರುವ ಇಬ್ಬರಲ್ಲಿ ಒಬ್ಬರು ಕರ್ತವ್ಯದಲ್ಲಿಲ್ಲದ ಪೋಲೀಸ್ ಅಧಿಕಾರಿಯಾಗಿದ್ದು ದಾಳಿ ನಡೆದ ಪ್ರದೇಶಗಳಲ್ಲೊಂದರ ಮಳಿಗೆಯೊಂದರಲ್ಲಿದ್ದರು ಎಂದೂ ಅವರು ತಿಳಿಸಿದರು. ಈ ಕೃತ್ಯವನ್ನೆಸಗಿದ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದ್ದು ನಮಗಿರುವ ಮಾಹಿತಯ ಪ್ರಕಾರ ಅವನೊಬ್ಬನೇ ಈ ಕೃತ್ಯವನ್ನು ನಡೆಸಿದ್ದಾನೆ ಎಂದೂ ಅವರು ತಿಳಿಸಿದರು. ಮುಂದುವರೆದು ಮಾತನಾಡಿದ ಅವರು, ಘಟನೆ ನಡೆದ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದೊಂದ ಭಯೋತ್ಪಾದಕ ದಾಳಿ ಎಂಬ ಶಂಕೆ ಮೂಡುವುದು ಸಹಜವಾದರೂ ಬೇರೆಲ್ಲಾ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಸಬೇಕಾಗುತ್ತದೆ ಎಂದರು.

ದಾಳಿ ನಡೆಸಿದ ಶಂಕಿತ ವ್ಯಕ್ತಿಯನ್ನು ಕಾನ್ಸ್‌ಬರ್ಗ್‌ವಾಸಿ 37 ವರ್ಷದ ಡೇನಿಶ್ ನಾಗರಿಕನೆಂದು ಗುರುತಿಸಲಾಗಿದೆಯೆಂದು ತಿಳಿಸಿದ ಅವರು ಈ ಮೊದಲು ಸ್ಥಳೀಯ ದೂರದರ್ಶನದಲ್ಲಿ ವರದಿಯಾಗಿದ್ದಂತೆ ನಾರ್ವೆ ದೇಶದ ಪ್ರಜೆಯಲ್ಲವೆಂದು ತಿಳಿಸಿದರು. ಸಾಮಾಜಿಕ ಜಾಲತಾಣಗಳ ಮಾಯಿತಿಗಳಲ್ಲಿ ಅನೇಕ ಊಹಾಪೋಹಗಳು ಕಂಡುಬಂದಿದ್ದು ಇದಕ್ಕೆ ಸಂಬಂಧಪಡದ ವ್ಯಕ್ತಿಗಳ ಹೆಸರುಗಳೂ ಕಂಡಬಂದ ಕಾರಣ ಮಾಹಿತಿಗಳ ಸತ್ಯಾಸತ್ಯತೆಯನ್ನು ನಾವು ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆವು ಎಂದೂ ಅವರು ತಿಳಿಸಿದರು. ಶಂಕಿತನನ್ನು ಸಮೀಪದ ಡ್ರಾಮನ್‌ ನಗರದ ಪೋಲೀಸ್ ಠಾಣೆಗೆ ಕರೆದೊಯ್ಯಲಾಗಿದೆಯೆಂದೂ ಅವರು ತಿಳಿಸಿದರು.

ಈ ಕೃತ್ಯದ ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ಟಿವಿ2 ವಾಹಿನಿಗೆ ತಿಳಿಸಿದಂತೆ ಪ್ರದೇಶದಲ್ಲಿ ಸ್ವಲ್ಪ ಶಾಂತಿಭಂಗವುಂಟಾಗಿ ಮಹಿಳೆಯೊಬ್ಬಳು ರಕ್ಷಣೆಗಾಗಿ ಸುರಕ್ಷಿತ ಸ್ಥಳಕ್ಕೆ ಓಡುತ್ತಿದ್ದು ಬಿಲ್ಲು-ಬಾಣಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬನು ಮೂಲೆಯೊಂದರಲ್ಲಿ ನಿಂತಿದ್ದುದು ಕಂಡುಬಂತು ಎಂದು ತಿಳಿಸಿದರು. ಅದಾದ ನಂತರ, ಜನರು ರಕ್ಷಣೆಗಾಗಿ ಅತ್ತಿಂದಿತ್ತ ಓಡತ್ತಿದ್ದು ಅವರಲ್ಲಿ ಮಗುವನ್ನು ಎತ್ತಿಕೊಂಡಿದ್ದ ಮಹಿಳೆಯೊಬ್ಬರು ಇದ್ದರು ಎಂದೂ ಅವರು ತಿಳಿಸಿದರು.

ರಾಜಧಾನಿ ಓಸ್ಲೋದಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ, 2500 ಜನಸಂಖ್ಯೆಯ ನಗರದಲ್ಲಿ ನಡೆದ ದಾಳಿಗಳ ಬಗ್ಗೆ ಸಂಜೆ 6:13ಕ್ಕೆ ಮಾಹಿತಿ ಪಡೆದ ಪೋಲೀಸರು ಸುಮಾರು 6:47ರ ಸಮಯದಲ್ಲಿ ಶಂಕಿತನನ್ನು ವಶಕ್ಕೆ ಪಡೆದರು.

ಇಂತಹ ಘಟನೆಗಳು ನಮ್ಮನ್ನು ಗಾಬರಿಗೊಳಿಸುತ್ತವೆ ಎಂದು ಪ್ರಧಾನ ಮಂತ್ರಿ ಎರ್ನಾ ಸೋಲ್‌ಬರ್ಗ್ ತಿಳಿಸಿದರು. ಇಂದು ಅವರ ಅಧಿಕಾರದ ಕಡೆಯ ದಿನವಾಗಿದ್ದು ಇತ್ತೀಚಿನ ಪಾರ್ಲಿಮೆಂಟ್‌ ಚುನಾವಣೆಗಳಲ್ಲಿ ಜಯಗಳಿಸಿದ ಲೇಬರ್ ಪಕ್ಷದ ಜೊನಾಸ್ ಸ್ಟೋರ್‌ರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.

ಕಾಂಗ್ಸ್‌ಬರ್ಗ್‌ಲ್ಲಿ ದಾಳಿ ನಡೆದ ಪ್ರದೇಶಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿರುವ ಪೋಲೀಸರು ಸಾರ್ವಜನಿಕರು ಮನೆಗಳಲ್ಲಿಯೇ ಇರುವಂತೆ ಮನವಿ ಮಾಡಿದ್ದಾರೆ. ದೂರದರ್ಶನದಲ್ಲಿ ಅಂಬ್ಯುಲೆನ್ಸ್‌ಗಳು ಹಾಗೂ ಸಶಸ್ತ್ರ ಪೋಲೀಸರು ಪ್ರದೇಶದಲ್ಲಿದ್ದುದು ಕಂಡುಬಂತಲ್ಲದೇ ಒಂದು ಹೆಲಿಕ್ಯಾಪ್ಟರ್ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನೂ ಸ್ಥಳಕ್ಕೆ ಕಳುಹಿಸಲಾಯಿತು.

ಸ್ಕಾಂಡಿನೇವಿಯನ್ ದೇಶದ ಪೋಲೀಸರು ಸಾಮಾನ್ಯ ಪರಿಸ್ಥಿತಿಗಳಲ್ಲಿ ಹೆಚ್ಚು ಶಸ್ತ್ರಸಜ್ಜಿತರಾಗಿರುವುದಿಲ್ಲ, ಆದರೆ, ಈ ಘಟನೆಯ ನಂತರ ರಾಷ್ಟ್ರೀಯ ಪೋಲೀಸ್ ನಿರ್ದೇಶನಾಲಯವು ಎಲ್ಲಾ ಅಧಿಕಾರಿಗಳು ಇನ್ನು ಮುಂದೆ ದೇಶಾದ್ಯಂತ ಸಂಪೂರ್ಣ ಶಸ್ತ್ರಸಜ್ಜಿತರಾಗಿರಬೇಕೆಂದು ಆದೇಶ ನೀಡಿದೆ.

ಪ್ರತ್ಯಕ್ಷದರ್ಶಿಯೊಬ್ಬರು ಕಳುಹಿಸಿದ, ಕಪ್ಪು ಬಾಣವೊಂದು ಗೋಡೆಗೆ ನಾಟಿಕೊಂಡಿರುವ ಛಾಯಾಚಿತ್ರವನ್ನು ಸ್ಥಳೀಯ ವಾರ್ತಾಸಂಸ್ಥೆಯೊಂದು ಬಿತ್ತರಿಸಿತ್ತು. ಇತರೆ ಛಾಯಾಚಿತ್ರಗಳಲ್ಲಿ, ಕೆಲವು ಸ್ಪರ್ಧಾತ್ಮಕ ಮಟ್ಟದ ಬಾಣಗಳು ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದುದು ಕಂಡುಬಂತು.

ನಾರ್ವೆ ದೇಶದಲ್ಲಿ ಇಂತಹ ಘಟನೆಗಳು ಸಂಭವಿಸುವುದು ಅಪರೂಪವಾದರೂ ಸುಮಾರು 10 ವರ್ಷಗಳ ಹಿಂದೆ ತೀವ್ರ ಬಲಪಂಥೀಯ ವಿಚಾರಧಾರೆಯ ಆಂಡರ್ಸ್ ಬ್ರೆವಿಕ್ ಎಂಬಾತ 77 ಜನರನ್ನು ಹತ್ಯ ಮಾಡಿದ್ದು ಎರಡನೇ ವಿಶ್ವಯುದ್ಧದ ನಂತರದ ಅತಿದೊಡ್ಡ ಹತ್ಯಾಕಾಂಡವಾಗಿತ್ತು. ಮೊದಲು ಪ್ರಧಾನಮಂತ್ರಿ ಕಾರ್ಯಾಲಯದ ಪಕ್ಕದ ಕಟ್ಟಡದಲ್ಲಿ ಬಾಂಬ್ ಸ್ಫೋಟಿಸಿದ್ದ ಬ್ರೆವಿಕ್ ನಂತರ ಉಟೋಯಾ ದ್ವೀಪದಲ್ಲಿ ನಡೆಯುತ್ತಿದ್ದ ಎಡಪಂಥೀಯರು ಭಾಗವಹಿಸಿದ್ದ ಯುವ ಬೇಸಿಗೆ ಶಿಬಿರವೊಂದರ ಮೇಲೆ ಗುಂಡಿನ ಮಳೆಗರೆದಿದ್ದ. ಇದೇ ರೀತಿಯ ಇನ್ನೊಂದು ಘಟನೆಯಲ್ಲಿ, ಸ್ವಘೋಷಿತ ನಿಯೋ-ನಾಝಿ ಫಿಲಿಪ್ ಮಾನ್‌ಶಾಸ್ 2019ರ ಆಗಸ್ಟ್‌ನಲ್ಲಿ ಓಸ್ಲೋ ನಗರದ ಹೊರವಲಯದಲ್ಲಿರುವ ಮಸೀದಿಯೊಂದರ ಮೇಲೆ ಗುಂಡಿನ ಮಳೆಗರೆದಿದ್ದು ಅಲ್ಲಿದ್ದವರೇ ಅವನನ್ನು ವಶಕ್ಕೆ ಪಡೆದಿದ್ದರು, ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿರಲಿಲ್ಲ. ಇದಕ್ಕೂ ಮೊದಲು ಅವನು ಚೀನಾದಿಂದ ದತ್ತು ಪಡೆಯಲಾಗಿದ್ದ ತನ್ನ ಮಲ ಸಹೋದರಿಯನ್ನೇ ಗುಂಡು ಹಾರಿಸಿ ಕೊಂದಿದ್ದ ಹಾಗೂ ಇದನ್ನು ಜನಾಂಗೀಯ ಹತ್ಯೆ ಎಂದು ಪರಿಗಣಿಸಲಾಗಿತ್ತು.

ಕೆಲವು ಜಿಹಾದಿ ದಾಳಿಗಳನ್ನೂ ರಕ್ಷಣಾಪಡೆಗಳು ವಿಫಲಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Suspect attacks public with bow and arrows in Kongsberg, terrorist act not ruled out

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ: ಹೆಚ್ಚಿದ ಆತಂಕ

ಇದನ್ನೂ ಓದಿ: ತಾಲಿಬಾನಿಗಳ ಭಯೋತ್ಪಾದನೆ ವಿರುಧ್ದ ಎಲ್ಲಾ ರಾಷ್ಟ್ರಗಳು ಒಟ್ಟಾಗಬೇಕು : ಸಚಿವ ಸುನಿಲ್ ಕುಮಾರ್

Tags: TOP NEWS
ShareSendTweetShare
Join us on:

Related Posts

Dhaka News: ಮರಣದಂಡನೆಗೆ ಗುರಿಯಾಗಿದ್ದ ಉಗ್ರನಿಗೆ ಬಾಂಗ್ಲಾ ಸುಪ್ರೀಂನಿಂದ ಖುಲಾಸೆ

Dhaka News: ಮರಣದಂಡನೆಗೆ ಗುರಿಯಾಗಿದ್ದ ಉಗ್ರನಿಗೆ ಬಾಂಗ್ಲಾ ಸುಪ್ರೀಂನಿಂದ ಖುಲಾಸೆ

Pakistan: ಕುರಾನ್‌ಗೆ ಅವಮಾನಿಸಿದ್ದಾನೆಂದು ಆರೋಪಿಸಿ, ಪ್ರವಾಸಿಗನಿಗೆ ಸಜೀವ ದಹನ ಶಿಕ್ಷೆ

Pakistan: ಕುರಾನ್‌ಗೆ ಅವಮಾನಿಸಿದ್ದಾನೆಂದು ಆರೋಪಿಸಿ, ಪ್ರವಾಸಿಗನಿಗೆ ಸಜೀವ ದಹನ ಶಿಕ್ಷೆ

ಟರ್ಕಿಗೆ ಶಾಕ್ ನೀಡಿದ ಭಾರತೀಯ ವ್ಯಾಪಾರಿಗಳು: ಮಹಾರಾಷ್ಟ್ರ ಮಾರುಕಟ್ಟೆಯಿಂದ ಮಹತ್ವದ ತೀರ್ಮಾನ

ಟರ್ಕಿಗೆ ಶಾಕ್ ನೀಡಿದ ಭಾರತೀಯ ವ್ಯಾಪಾರಿಗಳು: ಮಹಾರಾಷ್ಟ್ರ ಮಾರುಕಟ್ಟೆಯಿಂದ ಮಹತ್ವದ ತೀರ್ಮಾನ

ಭಾರತದ ಮೇಲೆ ಕ್ಷಿಪಣಿ ದಾಳಿ ಯತ್ನಿಸಿದ ಪಾಕ್: ”ಸುದರ್ಶನ ಚಕ್ರ” ಬಿಟ್ಟು ಹೊಡೆದುರುಳಿಸಿದ ನಮ್ಮ ಸೈನ್ಯ

ಭಾರತದ ಮೇಲೆ ಕ್ಷಿಪಣಿ ದಾಳಿ ಯತ್ನಿಸಿದ ಪಾಕ್: ”ಸುದರ್ಶನ ಚಕ್ರ” ಬಿಟ್ಟು ಹೊಡೆದುರುಳಿಸಿದ ನಮ್ಮ ಸೈನ್ಯ

Pak News: ಮತ್ತೆ ಡ್ರೋನ್ ದಾಳಿ ನಡೆಸಿದ ಭಾರತ: ಪಾಕ್‌ನ ರಾವಲ್ಪಿಂಡಿ ಮೈದಾನ ಉಡೀಸ್‌, ಪಂದ್ಯ ಸ್ಥಳಾಂತರ

Pak News: ಮತ್ತೆ ಡ್ರೋನ್ ದಾಳಿ ನಡೆಸಿದ ಭಾರತ: ಪಾಕ್‌ನ ರಾವಲ್ಪಿಂಡಿ ಮೈದಾನ ಉಡೀಸ್‌, ಪಂದ್ಯ ಸ್ಥಳಾಂತರ

National News: ಪಾಕ್ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ವಿರುದ್ಧ ಓವೈಸಿ ವಾಗ್ದಾಳಿ

National News: ಪಾಕ್ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ವಿರುದ್ಧ ಓವೈಸಿ ವಾಗ್ದಾಳಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Two killed: ಬೈಕ್‌ಗೆ ಮಹೀಂದ್ರಾ ಪಿಕಪ್ ಡಿಕ್ಕಿ ಇಬ್ಬರು ಸಾವು

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಹೀಗೆ ಮಾಡಿದರೆ ಏನಾಗುತ್ತದೆ..?

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In